ಹೊನ್ನಾವರ ಸ. 13 : ಬಳಕೂರಿನ ಪ್ರಸಿದ್ಧ ಪಂಡಿತ ಮನೆತನದ ಸುಮುಖ ಸುಬ್ರಹ್ಮಣ್ಯ ಪಂಡಿತ 4000 ಅಕ್ಕಿ ಕಾಳುಗಳನ್ನು ಜೋಡಿಸಿ ಶಿವಪಂಚಾಕ್ಷರಿಯ 5ಶ್ಲೋಕಗಳನ್ನು ಬರೆದು ಅಬ್ದುಲ್ ಕಲಾಂ ವರ್ಡ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿದ್ದಾರೆ.
26 ವರ್ಷದ ಸುಮುಖ ಓದಿದ್ದು ಇಂಜಿನೀಯರಿAಗ್. ಕರ್ನಾಟಕ, ಕೇರಳಗಳಿಗೆ ಜ್ಯೋತಿಷ್ಯದ ಆಕರಗ್ರಂಥಗಳನ್ನು ಕೊಟ್ಟ ವಿದ್ಯಾಮಾಧವ ಪಂಡಿತರ ವಂಶಜನಾದ ಈತ ಜ್ಯೋತಿಷ್ಯ ಅಭ್ಯಾಸ ಮಾಡುತ್ತಿದ್ದು ತಂದೆಯೊAದಿಗೆ ವೈದಿಕ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಗುರುಪೂರ್ಣಿಮೆಯಂದು ಅಕ್ಕಿಕಾಳನ್ನು ಜೋಡಿಸಲು ಆರಂಭಿಸಿ ಒಂದು ವಾರದಲ್ಲಿ ಮುಗಿಸಿರುವ ಸುಮುಖ ರಾಘವೇಶ್ವರ ಶ್ರೀಗಳಿಂದ ಸನ್ಮಾನ ಪಡೆದಿದ್ದಾರೆ. 30*24 ಇಂಚು ಅಳತೆಯ ಫಲಕದಲ್ಲಿ ಇವರ ಶಿವಪಂಚಾಕ್ಷರಿ ವೀಕ್ಷಿಸಿದ ದಾಖಲೆ ಮಾಡುವ ಸಂಸ್ಥೆಗಳು ಯುವಕನ ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿ, ದಾಖಲಿಸಿ, ಪದಕ ಮತ್ತು ಪ್ರಶಸ್ತಿಯನ್ನು ಕಳಿಸಿಕೊಟ್ಟಿವೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,