May 4, 2024

Bhavana Tv

Its Your Channel

ಯುವಕನ ಬರ್ಬರ ಕೊಲೆ : ಆರೋಪಿಗಳು ಪರಾರಿ..!

ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಯುವಕ ಬರ್ಬರ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಕೊಲೆಯಾದ ಯವಕ ಇನ್ನಾ ಕಿಶನ್ ಹೆಗ್ಡೆ ಎಂದು ತಿಳಿದು ಬಂದಿದೆ.ಕಿಶನ್ ಹೆಗ್ಡೆ ಈ ಹಿಂದೆ ಪಡುಬಿದ್ರೆಯಲ್ಲಿ ನಡೆದ ಕೊಲೆಯಾದ ನವೀನ್ ಡಿಸಿಲ್ವಾ ನ ಕೇಸಿನಲ್ಲಿ ಪ್ರಮುಖ ಆರೋಪಿ ಎನ್ನಲಾಗಿದೆ.ರೌಡಿ ಶೀಟರ್ ಆಗಿದ್ದು ಆತನಿಗೆ ಭೂಗತ ಲೋಕದ ಸಂಪರ್ಕ ಇತ್ತು ಎನ್ನಲಾಗಿದೆ. ಹಿರಿಯಡ್ಕದಲ್ಲಿ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಕಿಶನ್ ಹೆಗ್ಡೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ಮಲಾಗಿದೆ.ಕಿಶನ್ ಹೆಗ್ಡೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

error: