ಭಟ್ಕಳ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 34 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಸ್ತುತ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಅಣ್ಣಪ್ಪ ವಿ. ಮೊಗೇರ ಸೇವಾ ನಿವೃತ್ತಿ ಹೊಂದಿದ್ದಾರೆ.
ಮಲ್ಪೆಯಲ್ಲಿ ಇರುವ ಕರಾವಳಿ ಕಾವಲು ಪಡೆ ಎಸ್ಪಿ ಕಚೇರಿಯಲ್ಲಿ ನಿವೃತ್ತ ಅಣ್ಣಪ್ಪ ಮೊಗೇರರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಕರಾವಳಿ ಕಾವಲುಪಡೆ ಎಸ್ಪಿ ಮಿಥುನ್ ಎಚ್., ಡಿವಾಯ್ಎಸ್ಪಿ ಟಿ.ಎಸ್. ಸುಲ್ಟಿ, ಮಲ್ಪೆ ಠಾಣೆಯ ಪಿಐ ಸಂಪತ್ ಕುಮಾರ್, ಪಿಐ ಪ್ರಮೋದ್ ಮಲ್ಪೆ, ಪಿಐ ನಂಜಪ್ಪ, ಪಿಐ ನಿಶ್ಚಲಕುಮಾರ, ಪಿಐ ಮಂಜುನಾಥ ಬೇಲಿಕೇರಿ, ಪಿಎಸ್ಐ ವೀಣಾ ಚಿತ್ರಾಪುರ ಉಪಸ್ಥಿತರಿದ್ದರು. 1990ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಅಣ್ಣಪ್ಪ ಮೊಗೇರ, ಕಾರವಾರ, ಹೊನ್ನಾವರ, ಮಂಕಿ, ಕುಮಟಾ, ಮುರುಡೇಶ್ವರ, ಶಿರಸಿ, ಕದ್ರಾ, ಭಟ್ಕಳ ಶಹರ ಮತ್ತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ, ಕರಾವಳಿ ಕಾವಲು ಪಡೆ ಮಲ್ಪೆ ಹಾಗು ಕರಾವಳಿ ಕಾವಲು ಪಡೆ ಭಟ್ಕಳ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯವಾಗಿ ಜನಸಾಮಾನ್ಯರೊಂದಿಗೆ ಬೆರೆತು ಸಮಸ್ಯೆ ಆಲಿಸುತ್ತಿದ್ದ ಅಣ್ಣಪ್ಪ ಅವರನ್ನು ಸ್ಥಳೀಯವಾಗಿ ಹೆಚ್ಚಿನವರು ಅಣ್ಣಪ್ಪಣ್ಣ ಎಂದೇ ಸಂಬೋಧಿಸುತ್ತಿದ್ದರು.
More Stories
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ
ಮಲ್ಪೆ ಮೀನಗಾರಿಕಾ ರೈತ ಉತ್ಪಾದಕ ಕಂಪನಿಯಿ0ದ ವಿಶ್ವ ಪರಿಸರ ದಿನಾಚರಣೆ