May 11, 2024

Bhavana Tv

Its Your Channel

ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್

ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಸುಬ್ರಮಣ್ಯ ಧಾರೇಶ್ವರ ಬದುಕಿನಲ್ಲಿ ಕಂಡುAಡ ಅನುಭವವೇ ಅವರ ಕಲಾಶಕ್ತಿಗೆ ಪ್ರೇರಣೆಯಾಗಿತ್ತು ಎಂದು ನಿವೃತ್ತ ಶಿಕ್ಷಕ ವಿ.ಕೆ.ಭಟ್ ಹೇಳಿದರು.

ಹೊನ್ನಾವರ ; ಇತ್ತೀಚಿಗೆ ಧಾರೇಶ್ವರದ ಸಭಾಭವನದಲ್ಲಿ ದಿ. ಸುಬ್ರಮಣ್ಯ ಧಾರೇಶ್ವರರವರ ಅಭಿಮಾನ ಬಳಗ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಬದುಕಿನಲ್ಲಿ ಇನ್ನಷ್ಟು ಸಾಧಿಸಿ ತೋರಿಸು ಅವಕಾಶವಿದ್ದರೂ ವಿಧಿ ಅವರನ್ನು ಬಿಡಲಿಲ್ಲ. ನನ್ನ ವಿದ್ಯಾರ್ಥಿಯಾಗಿ, ಅಪ್ರತಿಮ ಸಾಧಕರಾಗಿ ಯಕ್ಷಗಾನಕ್ಕೆ ಹೊಸ ಶೈಲಿ ರೂಪಿಸಿದ ನಿರ್ಮಾತರಾಗಿದ್ದರು ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಯಕ್ಷಗಾನದ ಪ್ರಯೋಗಶೀಲ ಭಾಗವತರಾಗಿ ನಾಡು ಕಂಡ ಶ್ರೇಷ್ಠ ಕಲಾವಿದರಲ್ಲಿ ಓರ್ವರಾದ ಸುಬ್ರಮಣ್ಯ ಧಾರೇಶ್ವರರವರು ಎಲ್ಲಾ ಭಾವಗಳ ಬೇರಿನಂತೆ ಪಾತ್ರಕ್ಕೆ ತಕ್ಕ ಭಾಗವತಿಕೆಯ ಮೂಲಕ ಕಲಾರಸಿಕರ ಮನ ಗೆದ್ದ ಅಪರೂಪದ ಸಾಧಕರಾಗಿದ್ದರು. ಬಡಗು ತಿಟ್ಟಿನ ಪ್ರಖ್ಯಾತ ಭಾಗವತರಾಗಿ ಯಕ್ಷ ಪರಂಪರೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿ 25 ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಜನ ಮನ್ನಣೆ ಗಳಿಸಿದ ಅಪ್ರತಿಮ ಯಕ್ಷ ಕಲಾವಿದರಾಗಿದ್ದರು ಎಂದರು. ಅವರ ನಿಧನ ಯಕ್ಷಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಹೃದಯ ಸಿರಿವಂತಿಕೆ ಮತ್ತು ಕಲಾಸಿರಿವಂತಿಕೆ ನಾಡಿಗೆ ಮಾದರಿಯಾದದ್ದು ಎಂದರು.

ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಮು ಅಡಿ, ಪ್ರಭಾಕರ ಭಂಡಾರಿ, ಸುಬ್ರಹ್ಮಣ್ಯ ಭಟ್ಟ, ಆರ್.ಕೆ. ಭಟ್ಟ ಅವರ ಒಡನಾಟದ ಕುರಿತು ಮಾತನಾಡಿ ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ದೇವಗಿರಿ ಯುವ ಬಳಗದ ಅಧ್ಯಕ್ಷ ಸಚಿನ ನಾಯ್ಕ, ಧಾರನಾಥ ದೇವಸ್ಥಾನದ ಮೊಕ್ತೇಶ್ವರ ಲಕ್ಷ್ಮಣ ಪ್ರಭು, ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ನಾಯ್ಕ, ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಮಾರ ಭಟ್ಟ, ಉದ್ದಿಮೆದಾರರಾದ ಸುಬ್ಬು ಭಟ್ಟ, ನಾಗರಾಜ ಜೋಷಿ, ಕೇಶವ ಮಡಿವಾಳ, ಕೃಷ್ಣ ನಾಯ್ಕ, ಕಲಾವಿದ ಪಿ.ಎನ್.ಹೆಗಡೆ, ಅಭಿಮಾನಿ ಬಳಗದ ನಾಗರಾಜ ಶೇಟ್, ಶ್ರೀಕಾಂತ ಭಟ್ಟ, ಉದಯಭಟ್ಟ ಮುಂತಾದವರು ಉಪಸ್ಥಿತರಿದ್ದರು.

error: