May 4, 2024

Bhavana Tv

Its Your Channel

ಸೆಲ್ಫಿ ಕ್ರೇಜಿ ಹೊಳೆಯಲ್ಲಿ ಯುವಕನ ಜೀವ ನೀರುಪಾಲು .

ಬಾಗಲಕೋಟೆ: ಕಮತಗಿ – ಸಮೀಪದ ರಾಮತಾಳ ಬ್ರಿಜ್ ಕಮ್ ಬ್ಯಾರೇಜ್ ನಲ್ಲಿ ಬಿಜಾಪುರ ಮೂಲದ ತಜಮಿಲ್ ಮೈನುದ್ದಿನ್ ಬಹದ್ದೂರ್ ವಯಾ (೨೦) ಕಮತಗಿಯ ತಮ್ಮ ಸಂಬAಧಿಕರ ಮನೆಗೆ ದೇವರ ಕಾರ್ಯಕ್ಕೆ ಬಂದು ಊಟ ಮಾಡಿ ಊರಿಗೆ ಹೋಗುತ್ತೇನೆ ಎಂದು ಹೇಳಿಕೊಂಡು ಹೊಳೆಯಲ್ಲಿ ನೀರು ಕಂಡು ಸೆಲ್ಫಿ ಫೋಟೋ ತೆಗೆದುಕೊಂಡರಾಯ್ತು ಎಂದು ಯುವಕ ನೀರು ನೋಡಿ ಈಜು ಬೇಕೆಂದು ನದಿಗೆ ಇಳಿದಾಗ ಕಾಲು ಜಾರಿ ನದಿಗೆ ಬಿದ್ದು
ಸಾವನ್ನಪ್ಪಿದ್ದಾನೆ ಎಂದು ಉಹಿಸಲಾಗಿದೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ತಂತ್ರಗಳನ್ನು ಉಪಯೋಗಿಸಿ ಸ್ಥಳೀಯ ಮೀನುಗಾರರ ಸಹಾಯದಿಂದ ಅಗ್ನಿಶಾಮಕ ಶಾಮಕ ಸಿಬ್ಬಂದಿಯವರು ಯುವಕನ ಮೃತ ದೇಹವನ್ನು ಹೊರತೆಗೆದರು.
ಕಾರ್ಯಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಗದೀಶ, ಎಸ್.ಗಿರಡ್ಡಿ, ಸಿಬ್ಬಂದಿಯವರಾದ ಬಸವರಾಜ,ರಾಠೋಡ. ಅಮೀನಸಾಬ್,ಕಂದಗಲ್ಲ. ಸಂತೋಷ, ಕೆಲೂರ. ಸತೀಶ, ರಾಠೋಡ. ಬಸವರಾಜ, ಕಟ್ಟಿಮನಿ. ಇದ್ದರು

ವರದಿ:ವಿನೋದ ಬಾರಿಗಿಡದ ಇಳಕಲ್

error: