May 21, 2024

Bhavana Tv

Its Your Channel

ಐತಿಹಾಸಿಕ ಎನ್ ಟಿ ಎಂ ಶಾಲೆ ಕೆಡವಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸುವ ಶ್ರೀ ರಾಮಕೃಷ್ಣ ಆಶ್ರಮದ ನಿರ್ಧಾರಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ

ಗುಂಡ್ಲುಪೇಟೆ : ಮೈಸೂರು ಐತಿಹಾಸಿಕ ಎನ್‌ಟಿಎಂ ಶಾಲೆ ಕೆಡವಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸುವ ಶ್ರೀರಾಮಕೃಷ್ಣ ಆಶ್ರಮದ ನಿರ್ಧಾರಕ್ಕೆ ಇದೀಗ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದ್ದು, ವಿವೇಕಾನಂದರು ಉಳಿದಿದ್ದರು ಎನ್ನಲಾದ ನಿರಂಜನ ಮಠವನ್ನೂ ಉಳಿಸಿ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿದೆ.

ಮಠದ ಉಳಿವಿಗೆ ಹೋರಾಟದ ಕುರಿತು ಪಟ್ಟಣದ ಸೋಮೇಶ್ವರ ಕಲಾಮಂದಿರದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿರುವ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ನಿರಂಜನ ಮಠದ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಸಂಬAಧ ಶಾಲೆ ಕೆಡವಲು ತಯಾರಿ ನಡೆಸಲಾಗಿದೆ. ೨೦೦೯ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಂದೆ ಸ್ಮಾರಕ ನಿರ್ಮಿಸುವ ಪ್ರಸ್ತಾಪ ಸಲ್ಲಿಕೆಯಾಯಿತು. ಆಗಲೂ ವೀರಶೈವ ಮಹಾಸಭಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಎನ್‌ಟಿಎಂ ಶಾಲೆ ಹೋರಾಟ ಮುನ್ನೆಲೆಗ ಬಂದಿದ್ದು, ವೀರಶೈವ ಮಹಾಸಭಾವು ಸ್ಮಾರಕದ ವಿರುದ್ಧವಿಲ್ಲ. ಹಾಗೆ ಶಾಲೆಯನ್ನೂ ಉಳಿಸಿ, ವೀರಶೈವ- ಲಿಂಗಾಯತ ಅಸ್ಮಿತೆಯಾಗಿರುವ ನಿರಂಜನ ಮಠವನ್ನೂ ಉಳಿಸುವಂತಾಗಬೇಕು ಎಂದು ಒತ್ತಾಯಿಸುವ ಜೊತೆಗೆ ಅಕ್ಟೋಬರ್ ೩ ಭಾನುವಾರದಂದು ಮಠದ ಉಳಿವಿಗೆ ಹೋರಾಟ ಮಾಡುತ್ತಿರುವ ಸಮಿತಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ..

ವೀರಶೈವ ಮುಖಂಡ ಕಡಬೂರು ಮಂಜುನಾಥ್ ಮಾತನಾಡಿ ಶತಮಾನದ ಹಿಂದೆ ಮೈಸೂರಿಗೆ ಬಂದಿದ್ದ ಸ್ವಾಮಿ ವಿವೇಕಾನಂದರು ನಿರಂಜನ ಮಠದಲ್ಲಿ ತಂಗಿದ್ದರು. ೧೨ನೇ ಶತಮಾನದಲ್ಲಿ ಜೀವಿಸಿದ್ದ ಬಸವಣ್ಣನವರ ಅತಿಥಿ ದೇವೋ ಭವ ಎಂಬ ಉಕ್ತಿಯಂತೆ ಮಠ ಆಶ್ರಯ ನೀಡಿತ್ತು. ಅದು ಹೆಮ್ಮೆ ಮತ್ತು ಐತಿಹಾಸಿಕ ಘಟನೆಯೂ ಆಗಿದೆ. ಆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸುವುದು ಒಳ್ಳೆಯದೆ. ಅದೇ ರೀತಿ ನಿರಂಜನ ಮಠವನ್ನೂ ಉಳಿಸಿ ಸ್ಮಾರಕ ನಿರ್ಮಿಸಲಿ. ವೀರಶೈವರ ಭಾವನೆಗೆ ಧಕ್ಕೆ ತರಬಾರದು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ನಿರಂಜನ ಮಠದಲ್ಲಿನ ಗದ್ದುಗೆ, ಲಿಂಗ ಪ್ರತಿಷ್ಠಾಪನೆಯಾಗಿದೆ. ಆ ವಿಗ್ರಹಕ್ಕೆ ಈಗಲೂ ಪೂಜೆ ಸಲ್ಲಿಕೆಯಾಗುತ್ತಿದೆ. ಮುಜರಾಯಿ ಇಲಾಖೆಯವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ದರ್ಶನಾರ್ಥಿಗಳು ಪ್ರತಿ ಶಿವರಾತ್ರಿಯಂದು ಭೇಟಿ ನೀಡುತ್ತಾರೆ ಇದು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯಾಗಿದೆ ಜೇನು ಗೂಡಿಗೆ ಕಲ್ಲೆಸೆಯುವ ದುಸ್ಸಾಹಸಕ್ಕೆ ಕೈ ಹಾಕದಿರಿ ಎಂದು ಎಚ್ಚರಿಸಿದರು..

ವಿವೇಕಾನOದ ಸ್ಮಾರಕ ನಿರ್ಮಾಣ ಕಾರ್ಯವು ಎನ್‌ಟಿಎಂ ಶಾಲೆ ಮತ್ತು ನಿರಂಜನ ಮಠವನ್ನು ಒಡೆದು ಪೂರೈಸುವಂತಹದ್ದಲ್ಲ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ಮಠ, ಶಾಲೆ ನಾಶಪಡಿಸಿ ಸ್ಮಾರಕ ನಿರ್ಮಿಸಿದ್ದಲ್ಲಿ ವೀರಶೈವ- ಲಿಂಗಾಯತ ಸಮುದಾಯದ ಮುಖಂಡರು, ಯುವಜನರು ಹೋರಾಟ ನಡೆಸಬೇಕಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ…
ಈ ಸಂದರ್ಭದಲ್ಲಿತಾಲೂಕಿನ ವೀರಶೈವ-ಲಿಂಗಾಯತ ಮುಖಂಡರುಗಳು ಯುವಕರು ಭಾಗಿಯಾಗಿದ್ದರು

ವರದಿ ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: