May 18, 2024

Bhavana Tv

Its Your Channel

ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಎಂ ಶೈಲಾ ಕುಮಾರ್ ಸೇವಾಕಾಂಕ್ಷಿ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದವರಾದ ಎಂ ಶೈಲಾ ಕುಮಾರ್ ಮಾತನಾಡಿ ಜಾನಪದ ತವರು ಎಂದೇ ಹೆಸರುವಾಸಿಯಾಗಿರುವ ನಮ್ಮ ಚಾಮರಾಜನಗರ ಜಿಲ್ಲೆ ಪ್ರಸಿದ್ಧ ಸ್ಥಾನವಾಗಿದ್ದು.
ಮಲೆ ಮಾದೇಶ್ವರ ಬೆಟ್ಟ, ಶ್ರೀ ಮಂಟೇಸ್ವಾಮಿ, ಜಾನಪದ ಸಂಸ್ಕೃತಿಯನ್ನು ಉಳ್ಳನ್ ತಾಗಿದ್ದು ಮತ್ತು ಇಂತಹ ಜಾನಪದ ಸಂಸ್ಕೃತಿಯನ್ನು ತಳಹದಿ ಗಟ್ಟಿಯಾಗಿರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಚಟುವಟಿಕೆಗಳನ್ನು ತಾಲೂಕು ಕನ್ನಡ ಸಾಹಿತ್ಯಕ್ಕೆ ಒಂದು ಮೆರುಗನ್ನು ನೀಡುತ್ತದೆ ಹಾಗಾಗಿ ನಾವು ಸೇವಾಕಾಂಕ್ಷಿ ನಮ್ಮ ಪ್ರಣಾಳಿಕೆ. ಜಿಲ್ಲಾ ಕೇಂದ್ರದಲ್ಲಿ ಪರಿಷತ್ತ ಮಂದಿರ ನಿರ್ಮಾಣ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ಮತ್ತು ಎಲ್ಲಾ ತಾಲೂಕುಗಳಲ್ಲಿ ಸಾಹಿತ್ಯ ಪರಿಷತ್ತಿನ ಕಚೇರಿಗಳ ಕಾರ್ಯನಿರ್ವಹಣೆ, ಇವುಗಳು ನಮ್ಮಗಳ ಕನಸಾಗಿದೆ ಇದನ್ನು ನನಸಾಗಿಸಲು ತಮ್ಮ ಅಮೂಲ್ಯವಾದ ಮತವನ್ನು ನಮಗೆ ಮಾಡಿಕೊಡಬೇಕೆಂದು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇವಾಕಾಂಕ್ಷಿ ಎಂ ಶೈಲ ಕುಮಾರ್, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಚಿದಾನಂದ, ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಜಿಲ್ಲಾ ಕಾರ್ಯಧ್ಯಕ್ಷರ ಆದ ಅಬ್ದುಲ್ ರಶೀದ್, ಹರೀಶ್, ಇನ್ನು ಮುಂತಾದವರು ಹಾಜರಿದ್ದರು. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಗಳ ಭೇಟಿ ಮಾಡಿ ತಮ್ಮ ಅಮೂಲ್ಯವಾದ ಮತವನ್ನು ನಮಗೆ ಮಾಡಿಕೊಡಬೇಕೆಂದು ಕೋರಿದರು

ವರದಿ:ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

error: