May 19, 2024

Bhavana Tv

Its Your Channel

ಡಾಕ್ಟರ್ ವಿಷ್ಣುವರ್ಧನ್ ಪ್ರಶಸ್ತಿಗೆ ಗುಂಡ್ಲುಪೇಟೆಯ ಸದ್ದಾಮ್ ಅಹಮದ್ ಆಯ್ಕೆ

ಗುಂಡ್ಲುಪೇಟೆ:- ಡಾಕ್ಟರ್ ವಿಷ್ಣುವರ್ಧನ್ ಪ್ರಶಸ್ತಿಗೆ ಗುಂಡ್ಲುಪೇಟೆಯ ಮಾಡೆಲ್ ಸದ್ದಾಮ್ ಅಹಮದ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಹೃದಯಸ್ಪರ್ಶಿ ಎಜುಕೇಶನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಡಾಕ್ಟರ್ ವಿಷ್ಣುವರ್ಧನ್ ನಮನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಅರ್ಪಿಸಿ ಲೇಔಟ್ ನ ಹಂಪಿನಗರ ಗ್ರಂಥಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆಯ ನಟ ಮಾಡೆಲ್ ಹಾಗೂ ನೃತ್ಯ ಸಂಯೋಜಕರಾದ ಸದ್ದಾಮ್ ಮಹಮ್ಮದ್ ರವರು ಡಾಕ್ಟರ್ ವಿಷ್ಣುವರ್ಧನ್ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ

ವರದಿ: ಸದಾನಂದ ಕನ್ನೇಗಾಲ

error: