May 18, 2024

Bhavana Tv

Its Your Channel

ಕೃಷಿಕ ಸಮಾಜ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಗರಂ

ಗುಂಡ್ಲುಪೇಟೆ :- ಪಟ್ಟಣದ ಸಹಾಯಕ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಇಲಾಖೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಕೃಷಿಕ ಸಮಾಜದ ಅಧ್ಯಕ್ಷರಾದ ಕೆ .ಸಿ. ಮಧು ರವರ ನೇತೃತ್ವದಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ರವಿ ಅವರನ್ನು ಕಳೆದ ಮೂರು ವರ್ಷದಿಂದ ಇಲ್ಲಿಯತನಕ ಎಷ್ಟು ಗಿಡಗಳನ್ನು ನಿಮ್ಮ ಇಲಾಖೆ ವತಿಯಿಂದ ಕೊಟ್ಟಿದ್ದೀರಿ ಮತ್ತು ಎಷ್ಟು ಜೀವಂತವಾಗಿವೆ. ಅದರ ಬಗ್ಗೆ ಸ್ಥಳ ಪರಿಶೀಲನೆ ಮಾಡಬಹುದೇ ಎಂದು ಕೇಳಿದ ಪ್ರಶ್ನೆಗೆ ರವಿ ರವರು ಉತ್ತರ ಕೊಡದೆ ತಬ್ಬಿಬ್ಬಾದರು . ನಂತರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಯಶವಂತ ಗೌಡ ರವರನ್ನು ನಮ್ಮ ತಾಲೂಕಿನಲ್ಲಿ ಎಷ್ಟು ಕೆರೆಗಳ ಒತ್ತುವರಿಯನ್ನು ತೆರವು ಮಾಡಿದ್ದೀರಿ ನಿಮ್ಮ ಅವಧಿಯಲ್ಲಿ ಎಂದು ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ನೀಡಿ ಸಭೆಯಲ್ಲಿ ಮೌನವಾದರು ತಾಲೂಕಿನಲ್ಲಿ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು ಅದರ ಬಗ್ಗೆ ಕ್ರಮ ವಹಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದೆಂದು ಅಧಿಕಾರಿಗಳಿಗೆ ಅಧ್ಯಕ್ಷರು ತಿಳಿಸಿದರು ಅಲ್ಲದೆ ಒಂದು ದಿನ ಸ್ಥಳ ಪರಿಶೀಲನೆಗೆಂದು ಭೇಟಿ ನೀಡುತ್ತೇವೆ ಎಂದರು. ಇನ್ನು ಕೆಲವು ಇಲಾಖೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆಸಿ ಮದು, ಉಪಾಧ್ಯಕ್ಷರಾದ ಭಿಕ್ಷೆ ಶ್ಪ್ರಸಾದ್,ನಿರ್ದೇಶಕರುಗಳಾದ ಜಿ .ಜಿ ಮಲ್ಲಿಕಾರ್ಜುನ್, ಪ್ರಭುಸ್ವಾಮಿ ,ಮಹಾಲಿಂಗಪ್ಪ, ,ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: