March 29, 2024

Bhavana Tv

Its Your Channel

ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವ ಕಾರ್ಯಕ್ರಮ

ಪೊಲೀಸ್ ಎಂದರೆ ಸಾಮಾನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಸಲು ಅಂಜುಮನ್ ನೂರ್ ಮೊನ್ಟೆಸರಿ ವಿದ್ಯಾರ್ಥಿಗಳನ್ನು ಭಟ್ಕಳ ಪೊಲೀಸ ಠಾಣೆಗೆ ಕರೆದಂದು ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಭಟ್ಕಳ ಶಹರ ಠಾಣೆಗೆ ಬಂದ ಚಿಕ್ಕ ಚಿಕ್ಕ ಮಕ್ಕಳನ್ನು ಪೊಲೀಸರ ಸಂತೋಸದಿAದ ಸ್ವಾಗತಿಸಿ ಪೊಲೀಸ ಠಾಣೆಯ ವಿವರವನ್ನು ನೀಡಿದರು, ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಪೊಲೀಸರು ಎಂದರೆ ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನಾವೆಲ್ಲ ನಿಮ್ಮ ಗೆಳೆಯರಿದ್ದ ಹಾಗೆ ಯಾರು ತಪ್ಪು ಕೆಲಸ ಮಾಡುತ್ತಾರೋ ಅವರಿಗೆ ನಾವು ಶಿಕ್ಷೆ ನೀಡುತ್ತೇವೆ. ನಾವೆಲ್ಲ ದಿನದ ೨೪ ಗಂಟೆಗಳ ಕಾಲ ನಿಮ್ಮ ಸೇವೆ ಮಾಡಲಿದ್ದೇವೆ. ಭಟ್ಕಳ ತಾಲೂಕಿನ ಕೆಲವು ತಿಂಗಳಿನಿAದ ಶರಾವತಿ ಪಡೆ ಎಂಬ ಹೊಸ ತಂಡ ನೇಮಕವಾಗಿದ್ದು ಸಮಾಜದ ಸುತ್ತಮುತ್ತ ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ನಮ್ಮ ತಂಡಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು

ಸಿ.ಪಿ.ಐ ಎಂ.ಎಸ್ ಪ್ರಕಾಶ ಮಾತನಾಡಿ ಚಿಕ್ಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಕಾನೂನಿನ ಪಾಠವನ್ನು ಚಿಕ್ಕ ಮಕ್ಕಳಿಗೆ ಈಗಿನಿಂದಲೇ ಹೇಳಿಕೊಟ್ಟರೆ ದೊಡ್ಡವರಾದ ಮೇಲೆ ಕಾನೂನಿನ ಪರಿಜ್ಞಾನ ಮೂಡುತ್ತದೆ. ಚಿಕ್ಕ ಮಕ್ಕಳನ್ನು ನಾವೆಲ್ಲರು ಪ್ರೀತಿಸಬೇಕು ಅವರೇ ಮುಂದಿನ ದೇಶದ ಭವಿಷ್ಯವನ್ನು ರೂಪಿಸುತ್ತಾರೆ ಎಂದು ಹೇಳಿದರು

ನಂತರ ಅಂಜುಮನ್ ಶಿಕ್ಷಕಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪೊಲೀಸರು ಎಂದರೆ ಯಾರು ಹೆದರುವ ಅವಶ್ಯಕತೆ ಇಲ್ಲ ಅವರು ನಿಮ್ಮ ಸ್ನೇಹಿತರ ಹಾಗೆ. ನಮಗೆ ಯಾವುದೇ ತೊಂದರೆಗಳಾದರೆ ಪೊಲೀಸ ಠಾಣೆಗೆ ಬರಲು ಹೆದರ ಬಾರದು.ಅವರು ನಮಗೆ ಆಗುವ ತೊಂದರೆಗಳನ್ನು ನಿವಾರಣೆ ಮಾಡುತ್ತಾರೆ ಇದು ಮಕ್ಕಳಾದ ನಿಮಗೆ ತಿಳಿಯ ಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳೆಲ್ಲ ಸಂತೋಷದಿAದ ಪಾಲ್ಗೊಂಡರು ನಂತರ ಮಕ್ಕಳಿಗೆಲ್ಲ ಸಿಹಿ ವಿತರಣೆ ಮಾಡಲಾಯಿತು.

error: