ಕಿಕ್ಕೇರಿ: ಕುಟುಂಬಸ್ಥರಿoದ ನಡೆದ ಹೊಸ ವರ್ಷದ ಆಚರಣೆ ಬಗ್ಗೆ ಬೇರೆ ರೀತಿ ತಿರುಚುವ ಪ್ರಯತ್ನವನ್ನು ಖಾಸಗಿ ವಾಹಿನಿಯೊಂದು ಮಾಡಿದೆ ಎಂದು ಆರೋಪಿಸಿದರು
ಕೃಷ್ಣರಾಜಪೇಟೆಯ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಮನ್ಮುಲ್ ನಿರ್ದೇಶಕ ಎಚ್ ಟಿ ಮಂಜು ರವರ ರಾಜಕೀಯ ಏಳಿಗೆ ಸಹಿಸಲಾಗದೆ ಅವರನ್ನು ತೇಜೋವಧೆ ಮಾಡಿ ಕಪ್ಪುಚುಕ್ಕಿ ತರುವ ರಾಜಕೀಯ ಷಡ್ಯಂತ್ರ ಮಾಡಿದ್ದು ಕೆಲ ಕಿಡಿಕೇಡಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೆ ಮಾಡಿ ಮಾನಸಿಕ ನೋವು ಉಂಟು ಮಾಡುತ್ತಿದ್ದಾರೆ ಎಂದು ಎಚ್ ಟಿ ಮಂಜುರವ ಪತ್ನಿ ರಮಾರವರು ತಿಳಿಸಿದರು..
ಕೃಷ್ಣರಾಜಪೇಟೆ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾದ ಜಾನಕಿರಾಮ್ ರವರ ಮನೆಯಲ್ಲಿ ಹೊಸ ವರ್ಷವನ್ನು ಮೂರು ನಾಲ್ಕು ಕುಟುಂಬಗಳು ತಮ್ಮ ಹೆಂಡತಿ ಮಕ್ಕಳೊಂದಿ ಆಚರಣೆ ಮಾಡಿದ್ದಾರೆ ಆದ್ರೆ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಮಡದಿಯೊಂದಿಗೆ ಡ್ಯಾನ್ಸ್ ಮಾಡಿದ್ದು ಇದೇ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸ್ಥಳಿಯ ಮಾಧ್ಯಮ ಒಂದರಲ್ಲಿ ಬಿತ್ತರಿಸಿದ್ದಾರೆ ಎಂದು ಆಕ್ರೋಷ ವ್ಯಕ್ತ ಪಡಿಸಿದ್ದಾರೆ
ಸ್ನೇಹಿತರ 8 ವರ್ಷದ ಮಗಳನ್ನು ಮಗಳು ಎಂಬ ಮಮತೆಯಿಂದ ಕೈ ಹಿಡಿದು ಡ್ಯಾನ್ಸ್ ಮಾಡಿದ್ದು ತಪ್ಪೇ ಇದ್ದನ್ನೇ ತಪ್ಪು ಎಂದು ಸುದ್ದಿ ಬಿತ್ತರಿಸಿರುವುದು ಸರಿಯೇ ಎಂದು ಆಕ್ರೋಷ ಹೊರ ಹಾಕಿದರು ..
ಈಗಾಗಲ್ಲೇ ತಾಲ್ಲೂಕಿನಲ್ಲಿ ಎಚ್ ಟಿ ಮಂಜು ರವರು ತಮ್ಮದೇ ಚಾಪು ಮೂಡಿಸಿದ್ದು ಮುಂದಿನ ವಿಧಾನ ಸಭೆ ಚುನಾವಣೆಯ ಪ್ರಭಾವಿ ಆಕಾಂಕ್ಷಿಯಾಗಿದ್ದು ರಾಜ್ಯ ಮಟ್ಟದಲ್ಲೇ ಹೆಸರು ಕೇಳಿ ಬರುತ್ತಿದ್ದು ಇವರ ಹೆಸರು ಕೆಡಿಸಲು ಕೆಲ ಕಿಡಿಗೇಡಿಗಳು ಪ್ರಯತ್ನ ನಡೆಸುವುದನ್ನು ಬಿಟ್ಟು ಸಮಾಜಕ್ಕೆ ಏನಾದ್ರು ಒಳ್ಳೆಯದು ಮಾಡಲಿ ಎಂದು ತಿಳಿಸಿದರು
ವರದಿ ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ