ಕೃಷ್ಣರಾಜಪೇಟೆ ತಾಲ್ಲೂಕಿನ ಹಕ್ಕಿಹೆಬ್ಬಾಳು ಹೋಬಳಿಯ ಚಿಕ್ಕಮಂದಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡವು ನಿರ್ಮಾಣ ಮಾಡಲು ಎಲ್ಲಾ ನಿರ್ದೇಶಕರು ಹಾಗೂ ಶೇರುದಾರರು ತಿರ್ಮಾನ ಕೈಗೊಂಡಿದ್ದು ಆದರೆ ಸಂಘದ ಕಾರ್ಯದರ್ಶಿ ಮಮತಾ ಎಂಬುವರು ಕುಟುಂಬಕ್ಕೆ ಸೇರಿದ ಬಾಡಿಗೆ ಕಟ್ಟಡದಲ್ಲೇ ಮುಂದುವರಿಸುವAತೆ ಅಡಚಣೆ ಮಾಡ್ತಾ ಇದ್ದಾರೆ ಸಂಘದ ಈಗಾಗಲೇ 30 ಲಕ್ಷ ಆದಾಯ ಇದ್ದು ಕಾರ್ಯದರ್ಶಿ ಮಮತಾ ರವರು ಬಾಡಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಧ್ಯಕ್ಷರಾದ ಇಂದಮ್ಮ ರವರೊಂದಿಗೆ ಜೊತೆಗೊಡಿ ನಾನಾ ಕಾರಣ ಹೇಳಿ ಕಟ್ಟಡ ನಿರ್ಮಾಣ ಮಾಡು ತೊಂದರೆ ನೀಡುತ್ತಿದ್ದು. ಪ್ರಶ್ನೆ ಮಾಡಿದ ನಿರ್ದೇಶಕರ ವಿರುದ್ದ ಅವಶ್ಯಶಬ್ದಗಳಿಂದ ನಿಂದಿಸುತ್ತಿದ್ದಾರೆ, ಪೋಲೀಸ್ ಠಾಣೆಗೆ ದೂರು ನೀಡುವುದಾಗಿ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನೆಡೆಸಿದರು.
ಕೂಡಲೇ ಅಧ್ಯಕ್ಷರಾದ ವಿರುದ್ದ ಅವಿಶ್ವಾಸ ಮಂಡನೆ ಮಾಡಬೇಕು ಅಲ್ಲದೆ ಕಾರ್ಯದರ್ಶಿಯವರನ್ನು ವಜಾಗೊಳಿಸಿ ಬೇರೆ ಕಾರ್ಯದರ್ಶಿಯನ್ನು ಮರು ನೇಮಕ ಮಾಡಬೇಕು ಅಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು..
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಮಹಿಳಾ ಸಹಕಾರ ಸಂಘದ ನಿರ್ದೇಶಕರು ಹಾಗೂ ಶೇರುದಾರರು, ಸೇರಿದಂತೆ ನೂರಾರು ಗ್ರಾಮಸ್ಥರುಗಳು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ