ಕಿಕ್ಕೇರಿ: ನಾನು ಎಲ್ಲಾ ಸಮುದಾಯಕ್ಕೂ ಗೌರವ ನೀಡುತ್ತೇನೆ ಇದುವರೆಗೂ ಯಾವುದೇ ಸಮುದಾಯವನ್ನು ದಕ್ಕೆ ತರುವಂತೆ ಮಾಡಿಲ್ಲ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು ತಿಳಿಸಿದರು
ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡ ಕ್ಯಾತನಹಳ್ಳಿ ಗ್ರಾಮಕ್ಕೆ ದೇವಾಲಯದ ಪೂಜೆಗೆ ಹೋಗಿದ್ದ ಸಂದರ್ಭದಲ್ಲಿ ಸ್ಥಳಿಯ ಮುಖಂಡರಿAದ ಸಲ್ಪ ಗೊಂದಲವಾಯ್ತು ಈ ಸಂದರ್ಭದಲ್ಲಿ ನಾನು ದಲಿತರ ಮತ್ತು ಮಡಿವಾಳ ಜನಾಂಗದ ಬಗ್ಗೆ ತರುವಂತೆ ಮಾತಾಡಿದ್ದೇನೆ ಎಂದು ಆರೋಪವಾಗಿದ್ದು..
ಇಂದು ಬಿ ಎಲ್ ದೇವರಾಜುರು ರವರು ಕಿಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ನನ್ನ ರಾಜಕೀಯ ಬೆಳವಣೆಗೆ ಎಲ್ಲಾ ಸಮುದಾಯದರು ಇಷ್ಟು ದಿನ ನನ್ನನ್ನು ಬೆಳೆಸಿದ್ದಾರೆ ನಾನು ಯಾವುದೇ ಜಾತಿ ಬೇದ ಮಾಡಿಲ್ಲ ಮತ್ತು ಅವರ ಗೌರವಕ್ಕೆ ದಕ್ಕೆ ತರುವಂತೆ ಮಾತನಾಡಿಲ್ಲ ಹಾಗೇನಾದ್ರು ಗಲಾಟೆಯಲ್ಲಿ ನನ್ನ ಅರಿವಿಗೆ ಬಾರದೆ ಮಾತನಾಡಿದ್ರೆ ನಾನು ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಬಿ ಎಲ್ ದೇವರಾಜು, ಬಸ್ ಕೃಷ್ಣೇಗೌಡ್ರು, ರಾಮ್ ದಾಸ್, ಕಾಯಿ ಸುರೇಶ್, ಎಸ್ ಡಿ ಡಿ ರಮೇಶ್, ಚಿಕ್ಕತರಹಳ್ಳಿ ರಾಮಕೃಷ್ಣೇಗೌಡ್ರು, ದೊಡ್ಡತ್ತರಹಳ್ಳಿ ಡಾಣಶೇಖರ್, ಆಶೋಕ್, ಚಿಕ್ಕತರಹಳ್ಳಿ ಈರಪ್ಪ, ಬೈರೇಗೌಡ್ರು ಹೊನ್ನೆನಹಳ್ಳಿ ತಮ್ಮಣ್ಣ, ಆರ್ ಐ ಗೋಪಿ, ಗೊಂದಹಳ್ಳಿ ಸುರೇಶ್, ಚಿನ್ನೇನಹಳ್ಳಿ ನಾಗರಾಜು, ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ