May 7, 2024

Bhavana Tv

Its Your Channel

ಕೆ.ಆರ್.ಪೇಟೆ -ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸೀಮಂತ ಕಾರ್ಯಕ್ರಮ.

ಕೆ.ಆರ್.ಪೇಟೆ ; ಪುರಸಭೆ ಸದಸ್ಯೆ ಇಂದ್ರಾಣಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪುಷ್ಪಮಂಜುನಾಥ, ಅಂಗನವಾಡಿ ಕಾರ್ಯಕರ್ತೆ ಪಿ.ಮಹದೇವಮ್ಮ, ಸಹಾಯಕಿ ಕೆ.ಎಸ್.ರೂಪಾದೇವಿ ಅವರ ನೇತೃತ್ವದಲ್ಲಿ ನಡೆದ ಕೃಷಿ ಕೂಲಿ ಕಾರ್ಮಿಕ ಮಹಿಳೆ ರೋಜಾ ಅವರ ಸೀಮಂತ ಕಾರ್ಯಕ್ರಮವನ್ನು ನೂರಾರು ಮಹಿಳೆಯರು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ರೋಜಾಮಹೇಶ್ ಅವರಿಗೆ ಅರಿಶಿನಕುಂಕುಮ, ಬಳೆ, ಸೀರೆರವಿಕೆ ಕಣ ಹಾಗೂ ತೆಂಗಿನಕಾಯಿ ಕೊಟ್ಟು ಮುತ್ತೈದೆಗೆ ಶುಭ ಹಾರೈಸಿದರು.
ವಾರ್ಡಿನ ಮಹಿಳೆಯರು ಹಾಗೂ ಅಂಗನವಾಡಿಗೆ ಬರುವ ಮಕ್ಕಳ ತಾಯಂದಿರು ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಮುತ್ತೈದೆ ರೋಜಾ ಭಾವುಕರಾದರು.
ಕೃಷಿಕೂಲಿ ಕಾರ್ಮಿಕ ಮಹಿಳೆ ರೋಜಾ ಮಹೇಶ್ ಅವರ ಸೀಮಂತ ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದಲ್ಲಿ ಸಾರ್ವಜನಿಕರ ಸಹಕಾರದಿಂದ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆ ಮಹದೇವಮ್ಮ ಮತ್ತು ಸಹಾಯಕಿ ರೂಪಾದೇವಿ ಅವರನ್ನು ಮಹಿಳೆಯರು ಅಭಿನಂದಿಸಿದರು.
ಸೀಮAತ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಪ್ರಮೋದ್, ಮುಖ್ಯಾಧಿಕಾರಿ ಸತೀಶ್ ಕುಮಾರ್, ಸ್ವರ್ಣಜಯಂತಿ ಶಹರಿರೋಜ್ಗಾರ್ ಯೋಜನಾಧಿಕಾರಿ ಭಾರತಿ, ಮುಖಂಡರಾದ ವಿಶ್ವನಾಥ, ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು…

ಮಾಹಿತಿಗಾಗಿ ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ ಜಿಲ್ಲೆ.

error: