May 6, 2024

Bhavana Tv

Its Your Channel

ನಾಡಿನ ಖ್ಯಾತ ಜ್ಯೋತಿಷಿಗಳಾದ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಕೃಷ್ಣಮೂರ್ತಿ(90)ನಿಧನ..

ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದ ವಿಶ್ರಾಂತ ಶಿಕ್ಷಕರು, ಖ್ಯಾತ ಜ್ಯೋತಿಷಿಗಳು ಹಾಗೂ ಸಾಂಸ್ಕೃತಿಕ ಸಂಘಟಕರಾದ ಕೃಷ್ಣಮೂರ್ತಿ(90) ಅವರು ಇಂದು ಬಂಡಿಹೊಳೆ ಗ್ರಾಮದಲ್ಲಿ ನಿಧನರಾದರು….
ಮೃತರು ಪತ್ನಿ ಸುನಂದಮ್ಮ, ರವಿ, ಸತ್ಯನಾರಾಯಣ, ಲಕ್ಷ್ಮೀಕಾಂತ ಸೇರಿದಂತೆ ಮೂವರು ಪುತ್ರರು, ಬಂಧು, ಬಳಗ ಸೇರಿದಂತೆ ಅಪಾರವಾದ ಅಭಿಮಾನಿಗಳು ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಇಂದು ಸಂಜೆ ಬಂಡಿಹೊಳೆ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕೃಷ್ಣಮೂರ್ತಿ ಅವರ ನಿಧನಕ್ಕೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡ, ಸಚಿವ ಡಾ.ನಾರಾಯಣಗೌಡ, ಮಾಜಿಸಚಿವ ಸಿ.ಎಸ್.ಪುಟ್ಟರಾಜು, ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಹಿರಿಯ ಸಹಕಾರಿ ಧುರೀಣ ಬಿ.ಎಲ್.ದೇವರಾಜು, ಬಂಡಿಹೊಳೆ ಅಶೋಕ್ ಕುಮಾರ್, ವಿಶ್ರಾಂತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ, ಬಿಇಓ ಬಸವರಾಜು, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು, ಡಾ.ಎಸ್.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.
. ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ. ಮಂಡ್ಯ.

error: