ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿ ಚುಂಚನಹಳ್ಳಿ ಗ್ರಾಮದಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಅಶೋಕ ಅಲಿಯಾಸ್ ಸುಬ್ರಹ್ಮಣ್ಯ ಎಂಬ ವ್ಯಕ್ತಿಯನ್ನು ಬೆಳ್ಳೂರು ಠಾಣಾ ಪೊಲೀಸರು ತಿಪಟೂರಿನಲ್ಲಿ ಬಂಧಿಸಿದರು. ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.
ನಾಗಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನದ ಒಡವೆಗಳ ಕಳ್ಳತನ. ಅರಕಲಗೂಡು, ಯಡಿಯೂರು, ಶಿರಾ, ಹಾಗೂ ಬೀರೂರಿನಲ್ಲಿ, ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದಲ್ಲದೆ ಮೇ ತಿಂಗಳಲ್ಲಿ ತಿಪಟೂರು ಟೌನ್ ನಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡದಿಂದ ಕುಮಾರ್ ಎಂಬಾತನನ್ನು ಕೆಳಗೆ ತಳ್ಳಿ ಕೊಲೆ ಮಾಡಿ ಶವವನ್ನು ಯಾರಿಗೂ ಗೊತ್ತಾಗದಂತೆ ಬಟ್ಟೆಯಲ್ಲಿ ಸುತ್ತಿ ಚರಂಡಿ ಯೊಳಗೆ ಎಸೆದಿದ್ದಾಗಿ ತಿಳಿಸಿದ್ದಾನೆ. ಈ ಸಂಬಂಧ ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ನಾಗಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 62 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಶ್ವನಾಥ್, ಹಾಗೂ ಸಿಪಿಐ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಬೆಳ್ಳೂರು ಪಿಎಸ್ಐ ದಯಾನಂದ್, ಎಎಸ್ಐ ಮರಿಸ್ವಾಮಿ, ಸಿಬ್ಬಂದಿಗಳಾದ ಮಂಜುನಾಥ್, ಸಿ.ಜೆ ವಜ್ರ, ಗೋಪಾಲಕೃಷ್ಣ, ಸಂದೇಶ್ ಪಟೇಲ್, ಬಿ.ಕೆ ಕಿರಣ್ ಕುಮಾರ್, ಹನುಮಂತ, ಲಕ್ಷ್ಮಿಕಾಂತ್ ನಾಯಕ್, ಪುಂಡಲಿಕ ವಾಲಿಕರ್, ಪ್ರಭುಸ್ವಾಮಿ, ಚೇತನ್ ಕುಮಾರ್, ಪ್ರದೀಪ್, ಹಾಗೂ ಚಾಲಕ ಚಂದ್ರು, ಸಿದ್ದರಾಜು, ಪಾಲ್ಗೊಂಡಿದ್ದರು.
ಪ್ರಕರಣ ಬೇಧಿಸಿದ ಬೆಳ್ಳೂರು ಠಾಣಾ ಪೊಲೀಸ್ ತಂಡಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ನಗದು ಬಹುಮಾನ ಘೋಷಿಸಿದ್ದಾರೆ.
ವರದಿ: ದೇ.ರಾ .ಜಗದೀಶ ನಾಗಮಂಗಲ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ