May 10, 2024

Bhavana Tv

Its Your Channel

ಕುಪ್ಪಹಳ್ಳಿ ಗ್ರಾಮದ ಹೊರವಲಯದ ಚನ್ನೇಗೌಡರ ಫಾರಂಹೌಸ್ ನಲ್ಲಿ ಕಟ್ಟಿಹಾಕಿದ್ದ ೨ ಹಸುವಿನ ಕರುಗಳನ್ನು ಚಿರತೆಯು ದಾಳಿ ಮಾಡಿ ತಿಂದುಹಾಕಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದ ಹೊರವಲಯದ ಚನ್ನೇಗೌಡರ ಫಾರಂಹೌಸ್ ನಲ್ಲಿ ಕಟ್ಟಿಹಾಕಿದ್ದ ೨ ಹಸುವಿನ ಕರುಗಳನ್ನು ನಿನ್ನೆ ತಡರಾತ್ರಿ ಚಿರತೆಯು ದಾಳಿ ಮಾಡಿ ತಿಂದುಹಾಕಿರುವ ಘಟನೆಯು ನಡೆದಿದೆ. .

ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಹಸುವಿನ ಕರುಗಳನ್ನು ಚಿರತೆಯು ದಾಳಿ ಮಾಡಿ ತಿಂದು ಹಾಕಿರುವುದರಿಂದ ಕುಪ್ಪಹಳ್ಳಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಬೋನನ್ನು ಇಟ್ಟು ಚಿರತೆಯನ್ನು ಬಂಧಿಸಿ ರೈತರ ಜಾನುವಾರುಗಳು ಹಾಗೂ ಸಾಕುಪ್ರಾಣಿಗಳಿಗೆ ರಕ್ಷಣೆ ನೀಡಬೇಕು ಎಂದು ಗ್ರಾಮದ ಯುವಮುಖಂಡ ಪ್ರದೀಪ್ ಕೆ.ಆರ್.ಪೇಟೆ ತಾಲೂಕು ವಲಯ ಅರಣ್ಯಾಧಿಕಾರಿಗಳಾದ ಗಂಗಾಧರ ಅವರನ್ನು ಒತ್ತಾಯಿಸಿದ್ದಾರೆ .

ಕುಪ್ಪಹಳ್ಳಿ ಗ್ರಾಮದ ರಂಗೇಗೌಡ ಅವರ ಮಗನಾದ ಚನ್ನೇಗೌಡರು ತಾವು ಪ್ರೀತಿಯಿಂದ ಸಾಕಿದ್ದ ಎರಡು ಕರುಗಳನ್ನು ಕಳೆದುಕೊಂಡು ಸಾವಿರಾರು ರೂಪಾಯಿ ನಷ್ಠ ಅನುಭವಿಸಿದ್ದಾರೆ. ಆದ್ದರಿಂದ ಕೂಡಲೇ ವಲಯ ಅರಣ್ಯಾಧಿಕಾರಿಗಳು ಚನ್ನೇಗೌಡರಿಗಾಗಿರುವ ಆರ್ಥಿಕ ನಷ್ಠವನ್ನು ತುಂಬಿಕೊಡುವ ಜೊತೆಗೆ ಕುಪ್ಪಹಳ್ಳಿ ಗ್ರಾಮದಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಹಿಡಿದು ಗ್ರಾಮಸ್ಥರಲ್ಲಿ ಆವರಿಸಿರುವ ಭಯವನ್ನು ಹೋಗಲಾಡಿಸಬೇಕು ಎಂದು ಕುಪ್ಪಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ. ಸೈಯ್ಯದ್ ಖಲೀಲ್ .
ಕೃಷ್ಣರಾಜಪೇಟೆ . ಮಂಡ್ಯ

error: