May 4, 2024

Bhavana Tv

Its Your Channel

ಬೂಕನಕೆರೆ ಗ್ರಾಮದಲ್ಲಿ ಗ್ರಾಮದೇವತೆ ಗೋಗಾಲಮ್ಮ ದೇವಿಗೆ ೧೭ನೇ ವರ್ಷದ ಲಕ್ಷದೀಪೋತ್ಸವ

ಬೂಕನಕೆರೆ ಗ್ರಾಮದಲ್ಲಿ ಗ್ರಾಮದೇವತೆ ಗೋಗಾಲಮ್ಮ ದೇವಿಗೆ ೧೭ನೇ ವರ್ಷದ ಲಕ್ಷದೀಪೋತ್ಸವ, ಹೊಂಬಾಳೆ ಕಳಸಗಳ ಮೆರವಣಿಗೆಯ ಸಂಭ್ರಮ.. ಜಾನಪದ ಕಲಾತಂಡಗಳ ಕಲರವ..ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕರು

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಗ್ರಾಮದೇವತೆ ತಾಯಿ ಗೋಗಾಲಮ್ಮ ದೇವಿಗೆ ೧೭ನೇ ವರ್ಷದ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜಾ ಸಂಭ್ರಮ..

ಬೂಕನಕೆರೆ ಗ್ರಾಮದ ದೊಡ್ಡ ಕೆರೆಯಿಂದ ನೂರಾರು ಬಿಂದಿಗೆಗಳನ್ನು ಹೊತ್ತು ಹೊಂಬಾಳೆ ಕಳಸಗಳ ಮೆರವಣಿಗೆ ನಡೆಸಿದ ಮುತ್ತೈದೆಯರು ದೇವಿಗೆ ಅಭಿಷೇಕ ಮಾಡಲು ಪವಿತ್ರ ಗಂಗಾಜಲವನ್ನು ಸಮರ್ಪಿಸಿದರು. ಗ್ರಾಮದ ಮುಖಂಡ ವೆಂಕಟೇಶ್ ಮಾತನಾಡಿ ತಾಲ್ಲೂಕಿನ ಸಾಂಸ್ಕೃತಿಕ ಗ್ರಾಮ ಹಾಗೂ ನಾಡಿಗೆ ಮಾಜಿಮುಖ್ಯಮಂತ್ರಿಯಾದ ರೈತನಾಯಕ ಯಡಿಯೂರಪ್ಪ ಅವರನ್ನು ಕೊಡುಗೆಯಾಗಿ ನೀಡಿದ ಗ್ರಾಮವಾಗಿದೆ. ಇಂದಿನ ವಿಶೇಷ ಕಾರ್ಯಕ್ರಮ ಹಾಗೂ ಲಕ್ಷದೀಪೋತ್ಸವವನ್ನು ಗ್ರಾಮದ ಎಲ್ಲಾ ಜನರು ಒಂದಾಗಿ ಸೇರಿಕೊಂಡು ಪಕ್ಷಾತೀತವಾಗಿ ಆಚರಿಸುತ್ತೇವೆ.ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಸೇರಿದಾಗ ನಾವು ಮಾಡುವ ಸಾಮಾಜಿಕ ಕಾರ್ಯಕ್ಕೆ ವಿಶೇಷ ಅರ್ಥ ಬರುತ್ತದೆ ಎಂದರು…

ಗ್ರಾಮದ ಮುಖಂಡರಾದ ಶ್ಯಾಂಪ್ರಸಾದ್, ಬೂಕನಕೆರೆ ಮಧುಸೂದನ್, ಹುಲ್ಲೇಗೌಡ, ಪ್ರಕಾಶ್, ನಾರಾಯಣಸ್ವಾಮಿ, ಡಾ.ಶ್ರೀನಿವಾಸಗೌಡ, ದೇವೇಗೌಡ, ಬಿ.ಜವರಾಯಿಗೌಡ, ಮಂಜುನಾಥ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: