May 5, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಸಚಿವ ನಾರಾಯಣಗೌಡ ಭೇಟಿ

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಸಚಿವ ನಾರಾಯಣಗೌಡ ಭೇಟಿ ನೀಡಿ ಕಾಲೇಜಿನ ನೂತನ ಕಟ್ಟಡ ವೀಕ್ಷಿಸಿ, ವಿದ್ಯಾರ್ಥಿನಿಯರಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು…

ಕಾಲೇಜಿನ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಪ್ರಾಂಶುಪಾಲ ಡಾ.ಸಿ.ರಮೇಶ್ ಮತ್ತು ಪತ್ರಾಂಕಿತ ವ್ಯವಸ್ಥಾಪಕರಾದ ಬಳ್ಳೇಕೆರೆ ಮಂಜುನಾಥ್…

ಕಾಲೇಜಿಗೆ ತುರ್ತಾಗಿ ರಕ್ಷಣಾ ದೃಷ್ಟಿಯಿಂದ ಅಗತ್ಯವಿರುವ ಕಬ್ಬಿಣದ ಚೈನ್ ಗೇಟ್ ಮತ್ತು ಕೊಠಡಿಗೆ ಅಳವಡಿಸಲು ಕಬ್ಬಿಣದ ಗ್ರಿಲ್ ಗಳನ್ನು ಮಾಡಿಸಲು ತಮ್ಮ ಶಾಸಕರ ಅನುದಾನದಿಂದ 5ಲಕ್ಷರೂ ಅನುದಾನ ನೀಡುವುದಾಗಿ ಸಚಿವ ಘೋಷಿಸಿದ ಸಚಿವ ನಾರಾಯಣಗೌಡ

ಸಚಿವರಿಗೆ ಸಾಥ್ ನೀಡಿದ ಜಿ.ಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ ಮತ್ತು ಸಚಿವರ ಆಪ್ತಸಹಾಯಕರಾದ ಕಿಕ್ಕೇರಿ ಕುಮಾರ್ ಮತ್ತು ಸಾರಂಗಿ ಮಂಜುನಾಥಗೌಡ ಹಾಜರಿದ್ದರು. ಸಚಿವರ ಶೈಕ್ಷಣಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: