May 4, 2024

Bhavana Tv

Its Your Channel

ಚಟ್ಟಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಬಿಜೆಪಿ ತೆಕ್ಕೆಗೆ

ಕೃಷ್ಣರಾಜಪೇಟೆ:- ಚಟ್ಟಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಬಿಜೆಪಿ ತೆಕ್ಕೆಗೆ..ಅಧ್ಯಕ್ಷರಾಗಿ ಮರೀಗೌಡ, ಉಪಾಧ್ಯಕ್ಷ ಸ್ವಾಮಿಗೌಡ ಅವಿರೋಧ ಆಯ್ಕೆ.. ಜನತೆಯ ಸ್ವಾಗತ ..

ಕೃಷ್ಣರಾಜಪೇಟೆ ತಾಲ್ಲೂಕಿನ ಚಟ್ಟಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮರೀಗೌಡ ಮತ್ತು ಉಪಾಧ್ಯಕ್ಷರಾಗಿ ಸ್ವಾಮಿಗೌಡ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು..

ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರಾದ ಮರೀಗೌಡ ಮತ್ತು ಸ್ವಾಮಿಗೌಡರ ಗೆಲುವು ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿ ಪರ್ವಕ್ಕೆ ಸಿಕ್ಕ ಗೆಲುವಾಗಿದೆ ಎಂದು ಅಭಿಮಾನದಿಂದ ಅಂಬರೀಶ್ ಹೇಳಿದರು.

ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಸಚಿವರು ಕಟ್ಟಹಳ್ಳಿ ಏತನೀರಾವರಿ ಯೋಜನೆಯನ್ನು ೨೬೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿಸಿ ಹೋಬಳಿಯ ಜನರ ೪೦ ವರ್ಷಗಳ ಕನಸನ್ನು ನನಸು ಮಾಡಿದ್ದಾರೆ ಎಂದು ತಿಳಿಸಿದ ಅಂಬರೀಶ್ ಚಟ್ಟಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬಿಜೆಪಿ ಪಕ್ಷದ ವಶವಾಗಲು ಕಾರಣರಾದ ಆಡಳಿತ ಮಂಡಳಿಯ ನಿರ್ದೇಶಕರಾದ ಹೇಮಕುಮಾರ್, ಕೃಷ್ಣೇಗೌಡ, ಮುದ್ದೇಗೌಡ, ರಾಮೇಗೌಡ, ರಾಘವೇಂದ್ರ, ಎಸ್.ಕೆ.ಪ್ರಕಾಶ್ ಮತ್ತು ಶೀಳನೆರೆ ಹೋಬಳಿಯ ಬಿಜೆಪಿ ಮುಖಂಡರನ್ನು ಅಭಿನಂದಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: