May 4, 2024

Bhavana Tv

Its Your Channel

ಬೈಕ್ ಅಪಘಾತದಲ್ಲಿ ನರೇಗಾ ಇಂಜಿನಿಯರ್ ವಿಧಿವಶ

ಕೆ.ಆರ್.ಪೇಟೆ ತಾಲ್ಲೂಕಿನ ಚನ್ನರಾಯಪಟ್ಟಣ ರಸ್ತೆ ಐಕನಹಳ್ಳಿ ಗೇಟ್ ಬಳಿ ಬೈಕ್ ಅಪಘಾತ.ನರೇಗಾ ಎಂಜಿನಿಯರ್ ಯುವಕ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಕಿಕ್ಕೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಕೃಷ್ಣರಾಜಪೇಟೆ ತಾಲ್ಲೂಕಿನ ಚಿಕ್ಕತರಹಳ್ಳಿ ಗ್ರಾಮದ ಶ್ರೀನಿವಾಸಮೂರ್ತಿ ರವರ ಎರಡನೇ ಮಗ ಮಹೇಂದ್ರ ಸಿ.ಎಸ್ (ಮೇಟಿ) (29) ಸಾವಿಗೀಡಾದ ದುರ್ದೈವಿ.ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕಸಬಾ ಹೋಬಳಿ ಕೇಂದ್ರದ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಂದ್ರ..
ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: