May 4, 2024

Bhavana Tv

Its Your Channel

ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಯಾವುದೇ ಕೆಲಸಗಳಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ದಿನೇಶ ಗೂಳಿಗೌಡರ ಮುಂದೆ ಕೌನ್ಸಿಲರ್‌ಗಳ ಆಕ್ರೋಶ

ನಾಗಮಂಗಲ:-ಜೆಡಿಎಸ್ ತೆಕ್ಕೆಯಲ್ಲಿರುವ ನಾಗಮಂಗಲ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಯಾವುದೆ ಕೆಲಸಗಳಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಗೂಳಿಗೌಡರ ಮುಂದೆ ಕೌನ್ಸಿಲರ್ ಗಳು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

ನಾಗಮAಗಲ ಕ್ಷೇತ್ರದ ಬಿಂಡಿಗನವಿಲೆ ಗ್ರಾಮ ಪಂಚಾಯಿತಿ ವಾಸ್ತವ್ಯ ನಿಮಿತ್ತ ಪುರಸಭೆಗೆ ಭೇಟಿ ನೀಡಿದ ಗೂಳಿ ಗೌಡ ರಾಜಕೀಯ ತಿಕ್ಕಾಟದಲ್ಲಿ ಹಲವು ವರ್ಷಗಳಿಂದ ಉದ್ಘಾಟನೆ ಆಗದೆ ನೆನೆಗುದಿಗೆ ಬಿದ್ದಿರುವ ಸೂಪರ್ ಮಾರ್ಕೆಟ್ ಪರಿಶೀಲನೆ ನಡೆಸಿದರು.
ಈ ವೇಳೆ ಹಲವು ಮುಖಂಡರು ಸೂಪರ್ ಮಾರ್ಕೆಟ್ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ದೂರಿದರು.

ನಂತರದಲ್ಲಿ ಪುರಸಭೆ ಕಚೇರಿಯಲ್ಲಿ ಸದಸ್ಯ ರೊಂದಿಗೆ ಚರ್ಚೆ ನಡೆಸಿದ ವೇಳೆ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳ ಸಮಸ್ಯೆಗಳಿಗೆ ಅಧಿಕಾರಿಗಳಾಗಲಿ ಅಧ್ಯಕ್ಷರಾಗಿ ಸ್ಪಂದಿಸುತ್ತಿಲ್ಲ ಕನಿಷ್ಠ ಬೀದಿ ದೀಪ, ಚರಂಡಿ ಸ್ವಚ್ಛತೆಗೂ ಕೌನ್ಸಿಲರ್ ಗಳು ಗೂಗರೆಯಬೇಕು ಎಂದು ಪುರಸಭೆ ಆಡಳಿತ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ಬಗ್ಗೆ ಮಧ್ಯ ಪ್ರದೇಶ ಮಾಡಿದ ಪುರಸಭೆ ಅಧ್ಯಕ್ಷೆ ಆಶಾ ವಿಜಯ್ ಕುಮಾರ್ ನಾವು ಎಂದು ಪಕ್ಷ ತಾರತಮ್ಯ ಮಾಡಿಲ್ಲ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಶೈಲಾ ಮಾತನಾಡಿ ನಮಗೆ ಸಿಬ್ಬಂದಿ ಕೊರತೆ ಇದೆ ಎಂದು ಸಮಸ್ಯೆ ಮುಂದಿಟ್ಟರು.

ಸಭೆ ಬಳಿಕ ಮಾತನಾಡಿದ ಎಂಎಲ್ಸಿ ಗೂಳಿ ಗೌಡ ಪುರಸಭೆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಗೈಗೊಳ್ಳಲಿದ್ದು ನಾಗಮಂಗಲ ಸ್ಲಂ ಬೋರ್ಡ್ ವಿಚಾರ ವಾಗಿ ವಸತಿ ಸಚಿವರು ಬಳಿ ಚರ್ಚಿಸುವ ಭರವಸೆ ನೀಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಜಾಫರ್ ಹೊರತು ಪಡಿಸಿ ಬಹುತೇಕ ಕಾಂಗ್ರೆಸ್ ಸದಸ್ಯರು ಮಾತ್ರವೇ ಹಾಜರಿದ್ದು ಇದ್ದವರಲ್ಲಿ ಮಹಿಳಾ ಸದಸ್ಯರ ಗೈರಿನಲ್ಲಿ ಅವರ ಪತಿಯವರು ಎಂಎಲ್ಸಿ ಮುಂದೆ ದರ್ಬಾರ್ ಮಾಡುತ್ತಿದ್ದು ಚರ್ಚೆಗೂ ಕಾರಣವಾಗಿತ್ತು

ವರದಿ: ಚಂದ್ರಮೌಳಿ ನಾಗಮಂಗಲ

error: