ನಾಗಮಂಗಲ:- ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮತ್ತು ಮೇಕೆದಾಟು ಪೂರ್ವಭಾವಿ ಸಭೆಯ ನಾಗಮಂಗಲ ಮತ್ತು ಕೇರ್ ಪೇಟೆ ವಿಭಾಗದ ಎರಡು ತಾಲೂಕುಗಳನ್ನು ಒಳಗೊಂಡAತೆ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿ ಹಿಂಭಾಗ ಆಯೋಜಿಸಲಾಗಿತ್ತು
ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಚೆಲುವರಾಯಸ್ವಾಮಿ ಯವರು ಮಾತನಾಡಿ ಸದಸ್ವತ್ವ ಅಭಿಯಾನ ಕುರಿತು ನಮ್ಮ ಕಾರ್ಯಕರ್ತರು ಆಸಕ್ತಿಯಿಂದ ಕೆಲಸವನ್ನು ನಿರ್ವಹಿಸುತ್ತಿದ್ದರು ಮತ್ತಷ್ಟು ಸಕ್ರಿಯರಾಗಬೇಕು ಪ್ರತಿ ಬೂತ್ ಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕು ಎಂದು ತಿಳಿಸಿದರು
ನಮ್ಮ ನಾಯಕರಿಗೆ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮೂರು ಲಕ್ಷ, ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಐವತ್ತು ಸಾವಿರ ಸದಸ್ಯತ್ವವನ್ನು ಮಾಡುತ್ತೇವೆ ಎಂದು ತಿಳಿಸಿದ್ದೇವೆ
ಇನ್ನು ನಮ್ಮ ಹಕ್ಕು ನಮ್ಮ ನೀರು ಮೇಕೆದಾಟು ಯೋಜನೆ ರಾಜ್ಯದ ಸಮಸ್ಯೆಯಾಗಿದೆ ಈ ಹೋರಾಟಕ್ಕೆ
ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಎರಡು ಸಾವಿರ ಜನ ಬರಬೇಕು ಜಿಲ್ಲೆ ಯಿಂದ ಇಪ್ಪತ್ತು ಸಾವಿರ ಜನ ಬರಬೇಕು ತಿಳಿಸಿದರು
ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿ.ಜೆ.ಪಿ.ಆಡಳಿತ ರೈತರಿಗೆ ಅನ್ಯಾಯ ಮಾಡಿದೆ ಪ್ರಸ್ತುತ ನಡೆಸಿರುವ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಶೀಘ್ರಗತಿಯಲ್ಲಿ ಮುಗಿಸಿ
ಸದಸ್ಯತ್ವ ಅತಿವೇಗವಾಗಿ ಮಾಡಬೇಕು ಪ್ರತಿ ಬೂತಿನಲ್ಲಿ ಒಂದು ಯುವಕ ಯುವತಿ ನೇಮಕಮಾಡಿ ಸದಸ್ಯತ್ವವನ್ನು ಮಾಡಬೇಕು ಮತ್ತು ಒಂದು ಬೂತಿನಲ್ಲಿ 250ಕ್ಕೂ ಹೆಚ್ಚು ಸದಸ್ಯರ ಸದಸ್ಯತ್ವವನ್ನು ಮಾಡಬೇಕು ಮತ್ತು ಮಂಡ್ಯ ಜಿಲ್ಲೆಯಲ್ಲಿ ಮೂರು ಲಕ್ಷ ಮೇಲೆ ಸದಸ್ಯತ್ವ ಆಗಬೇಕು ಎಂದರು.
ಯಾವ ಬೂತಿನಲ್ಲಿ ಸದಸ್ಯತ್ವವನ್ನು ಹೆಚ್ಚು ಮಾಡುತ್ತಾರೆ ಅವರಿಗೆ ಉತ್ತಮವಾದ ಬಹುಮಾನವನ್ನು ಕೊಡಲಾಗುವುದು ಎಂದು ಡಿಕೆಸಿ ತಿಳಿಸಿದರು
ಮೇಕೆದಾಟು ಪಾದಯಾತ್ರೆಗೆ ಪ್ರತಿ ಹಳ್ಳಿಯಲ್ಲಿ ಒಂದು ಬಸ್ಸಿನ ಜನ ಬರಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಗೂಳಿಗೌಡ, ಮಾಜಿ ಶಾಸಕರಾದ ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್
ರಮೇಶ ಬಂಡಿಸಿದ್ದೇಗೌಡ, ಚಿತ್ರ ನಟ ಸಚ್ಚಿನ್, ದ್ರವನಾರಾಯಣ, ಜಿಲ್ಲಾ ಅದ್ಯಕ್ಷ ಗಂಗಧರ ಹಾಗೂ ತಾಲೂಕ್ ಅಧ್ಯಕ್ಷ ಪ್ರಸನ್ನ ಹನುಮಂತು ಮತ್ತು ರಾಜೇಶ್ ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ