ಮೈಸೂರು:– ದಿ-4/10/2022ರಂದು ಮೈಸೂರಿನಲ್ಲಿ ದಸರಾ ಪ್ರಯಕ್ತ ನವರಾತ್ರಿಯ 9ದಿನಗಳು ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಆಯ್ಕೆಯಾದ ಹೊನ್ನಾವರದ ಸಿರಿ ರಾಜೇಶ ಕಿಣಿ ಇವಳ ಭರತನಾಟ್ಯ ನೃತ್ಯ ಪ್ರದರ್ಶನ ನಾದಬ್ರಹ್ಮ ಸಾಂಸ್ಕೃತಿಕ ವೇದಿಕೆಯಲ್ಲಿ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಇವಳ ನೃತ್ಯಗುರು ವಿದುಶಿ ಡಾ|| ಸಹನಾ ಭಟ್ ಹುಬ್ಬಳ್ಳಿ ಇವರ ನಿರ್ದೆಶನದಲ್ಲಿ ವಿದ್ವಾನ ಬಾಲಸುಬ್ರಮಣ್ಯ ಶರ್ಮ ಬೆಂಗಳೂರು ಇವರ ಸುಮಧುರ ಹಾಡುಗಾರಿಕೆಯಲ್ಲಿ “ಅಲರಿಪು ಉಮಾ ಮಹೇಶ್ವರಿ ವರ್ಣ” ಹಾಗು “ಕಾದಿರುವಳು ಶಬರಿ” ದೇವರನಾಮ ಪ್ರಸಂಗಕ್ಕೆ ಅಧ್ಬುತವಾಗಿ ನೃತ್ಯ ಪ್ರದರ್ಶನವನ್ನು ನೀಡಿ ನೆರೆದ ಪ್ರೇಕ್ಷಕರಿಂದ ಹಾಗೂ ಮೈಸೂರು ದಸರಾ ಸಮೀತಿಯಿಂದ ಅಭಿನಂದಿಸಲ್ಪಟ್ಟಳು.
ಈ ಕಾರ್ಯಕ್ರಮದಲ್ಲಿ ಮೃದಂಗದಲ್ಲಿ ವಿದ್ವಾನ್ ಶಶಿಶಂಕರ, ಮೈಸೂರು ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಕೇಶ ಮೈಸೂರು ಸಾಥ ನೀಡಿದರು.
More Stories
ಶತಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡೋತ್ಸವ
ಎನ್ ಟಿ ಎಂ ಶಾಲೆ ಉಳಿವಿಗಾಗಿ ಕಾವಲುಪಡೆಯ ರಾಜ್ಯ ಅಧ್ಯಕ್ಷರಾದ ಎಂ ಮೋಹನ್ ಕುಮಾರ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆ
ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು ಇವರಿಂದ ಕರವೇ ಫ್ರಾನ್ಸ್ ಡಿಸೋಜ ರವರಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ ನೀಡಿ ಗೌರವ