May 5, 2024

Bhavana Tv

Its Your Channel

ಹರಿತವಾದ ಆಯುಧದಿಂದ ಕೊಚ್ಚಿ ಯುವಕನ ಕೊಲೆ

ಹಾಸನ: ಚನ್ನರಾಯಪಟ್ಟಣ ವೃದ್ಧ ದಂಪತಿ ಜೋಡಿ ಕೊಲೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಕೊಲೆಯಾಗಿದೆ.
ಗೊರೂರು ರಸ್ತೆಯ ಎರೆಬಾರೆ ಕಾವಲು ಸಮೀಪ ಯುವಕನೊಬ್ಬನನ್ನು ಹತ್ಯೆ ಗೈಯಲಾಗಿದ್ದು, ಕೊಲೆಯಾದವನನ್ನು ಸಮೀಪದ ಜವೇನಹಳ್ಳಿ ಗ್ರಾಮದ ಸ್ವಾಮಿಗೌಡ ಎಂಬುವವರ ಪುತ್ರ ದಿನೇಶ್(30) ಎಂದು ಗುರುತಿಸಲಾಗಿದೆ.ಕೃಷಿ ಕೆಲಸ ಮಾಡಿಕೊಂಡಿದ್ದ ದಿನೇಶ್ ಬುಧವಾರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದು,ಗುರುವಾರ ಮುಂಜಾನೆ ಗ್ರಾಮದ ಸಮೀಪದ ಪ್ರದೇಶದಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.ಹರಿತವಾದ ಆಯುಧದಿಂದ ಕೊಚ್ಚಿ ಕೊಂದಿರುವ ದುಷ್ಕರ್ಮಿಗಳು,ಗುರುತು ಸಿಗದಂತೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ವಿರೂಪಗೊಳಿಸಿದ್ದಾರೆ. ಸ್ಥಳಕ್ಕೆ ಗೊರೊರು ಪಿಎಸ್ಐ ಜಗದೀಶ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ

error: