May 5, 2024

Bhavana Tv

Its Your Channel

ಅರೇಹಳ್ಳಿಯಲ್ಲಿ ಗಾಂಜಾ ಮಾರಾಟಗಾರರ ಬಂಧನ

ಬೇಲೂರು: ತಾಲೂಕಿನ ಅರೇಹಳ್ಳಿ ಸಂತೆ ಮೈದಾನದಲ್ಲಿ ಗಾಂಜಾ ಸೊಪ್ಪಿನ ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ದ ೫ ಜನರನ್ನು ಬಂಧಿಸಿ ಮಾರಾಟಕ್ಕೆ ಬಳಸುತ್ತಿದ್ದ ಓಮಿನಿ ಕಾರು, ೨ ಬೈಕು ೧ ಸ್ಕೂಟರ್‌ಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ತಾಲೂಕು ತಹಸೀಲ್ದಾರ್ ಎನ್.ವಿ. ನಟೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದಾಗ ಸಂತೆ ಮೈದಾನದಲ್ಲಿ ಜನರಿಗೆ ಗಾಂಜಾ ಸೊಪ್ಪಿನ ಪ್ಯಾಕೇಟ್‌ಗಳನ್ನು ಓಮಿನಿ ವಾಹನ ಹಾಗೂ ಬೈಕುಗಳಲ್ಲಿ ಕುಳಿತು ಮಾರಾಟ ಮಾಡುತ್ತಿರುವುದು ಕಂಡುಬoದಿದೆ. ದಾಳಿಯಲ್ಲಿ ೧೫೦ ಗ್ರಾಂ. ಗಾಂಜಾ ಸೊಪ್ಪಿನ ೫೦
ಪ್ಯಾಕೆಟುಗಳು ದೊರತಿವೆ.ಆರೋಪಿಗಳಾದ ಅರೇಹಳ್ಳಿ ಇಬ್ರಾಹಿಂ, ಮುಶೀರ್‌ಅಹ್ಮದ್, ಜಮೀರ್, ಆಚಂಗಿ ಗ್ರಾಮದ ಪ್ರವೀಣ ಹಾಗೂ ಅಬ್ದುಲ್ ಅಜೀಜ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಸಿಪಿಐ ಸಿದ್ದರಾಮೇಶ್ವರ್, ಬೇಲೂರು ಪಿಎಸ್‌ಐ ಅಜಯಕುಮಾರ್, ಅರೇಹಳ್ಳಿ ಪಿಎಸ್‌ಐ ಮಹೇಶ್. ಸಿಬ್ಬಂದಿಗಳಾದ ಶಿವಶಂಕರ್, ನಂದೀಶ್, ಹನುಮಂತ ವಡ್ಡರ್ ಇದ್ದರು.

error: