May 7, 2024

Bhavana Tv

Its Your Channel

ಶಿಕ್ಷಣ, ಆರೈಕೆ, ಪೋಷಣೆ ಮಕ್ಕಳ ದಿನಾಚರಣೆಯ ಮೂಲಭೂತ ಉದ್ದೇಶವಾಗಲಿ-ಮಮತಾ ನಿಖಿಲ್

ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಯ್ಯಪ್ಪನಗರ ಇಲ್ಲಿ ನಡೆದ ೧೩೨ನೇ ನೆಹರು ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಮತಾ ನಿಖಿಲ್,(ಸುಗಮಕಾರರು. ಮಹಾತ್ಮಾಗಾಂಧಿ ವಸತಿ ಪ್ರೌಢಶಾಲೆ )ಬಹುಮಾನ ವಿತರಣೆಯನ್ನು ನೆರವೇರಿಸಿ, ಮಾತನಾಡುತ್ತಾ,ವಿದ್ಯಾರ್ಥಿಗಳು ಶಿಸ್ತು, ಉತ್ತಮ ಕಲಿಕೆ ಹಾಗೂ ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದರಿಂದ ಆಧುನಿಕ ಭಾರತದ ಕನಸು ನನಸಾಗಬಹುದೆಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಉಮಾ ಬಾಯಿ ಶುಭಾಶಯ ತಿಳಿಸಿದರು.
.ಶಿಕ್ಷಕಿ ಶ್ರೀಮತಿ ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದರು. ಪ್ರಭಾವತಿ ಧನ್ಯವಾದಗೈದರು. ಶಿಕ್ಷಕಿಯರಾದ ಶಿ ಕುಸುಮ, ಶ್ರಿ ಪ್ರೇಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಸ್ಫೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: