ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬದ ಸಂಭ್ರಮದ ವರುಷ ಹರುಷ ಕಾರ್ಯಕ್ರಮ ಪ್ರೊಫೆಸರ್ ಎಂ.ರಾಮಚAದ್ರ ಸಂಸ್ಮರಣೆ ,ಪ್ರಶಸ್ತಿ ಪ್ರಧಾನ ಗ್ರಂಥದ್ವಯ ಲೋಕಾರ್ಪಣೆ ಯ ಕಾರ್ಯಕ್ರಮ ಫೆಬ್ರವರಿ 26 ರಂದು ಸಂಜೆ 4.30 ಕ್ಕೇ ಸರಿಯಾಗಿ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ.
ಎಂದು ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ .ಕೆ.ಪಿ.ಶೆಣೈ ಕಾರ್ಕಳದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾಕ್ಟರ್ ಅಜಕ್ಕಳ ಗಿರೀಶ್ ಭಟ್ ಎಂ. ರಾಮಚಂದ್ರ ಭಟ್ ರವರಿಗೆ ನುಡಿ ನಮನ ಸಲ್ಲಿಸಲಿರುವರು.
ಬೆಟ್ಟಪ್ಪಾಂಡಿ ಕಾಲೇಜಿನ ಪ್ರಾಂಶುಪಾಲ ಸಾಹಿತ್ಯ ವಿಮರ್ಶಕ ಡಾಕ್ಟರ್ ವರದರಾಜ ಚಂದ್ರಗಿರಿ ಅವರನ್ನು ಪ್ರೊಫೆಸರ್ ಎಂ.ರಾಮಚAದ್ರ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.”ಪತ್ರ ಪಾಥೇಯ” ಮತ್ತು “ಕದಿರು ಕಟ್ಟು” ಕೃತಿಗಳ ಪರಿಚಯವನ್ನು ವಿದ್ವಾಂಸ ಡಾಕ್ಟರ್ ಪಾದೇಕಲ್ಲು ವಿಷ್ಣು ಭಟ್ ಮಾಡಲಿದ್ದಾರೆ ಎಂದು ಕೆ.ಪಿ.ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್ .ತುಕಾರಾಂ ನಾಯಕ್ , ಪ್ರಧಾನ ಕಾರ್ಯದರ್ಶಿ ಬಿ.ಪದ್ಮನಾಭ ಗೌಡ, ಕೋಶಾಧಿಕಾರಿ ನಿತ್ಯಾನಂದ ಪೈ,ಸಾಹಿತ್ಯ ಸಂಘದ ಕಾರ್ಯದರ್ಶಿ ಸಮಿತಿಯ ಸದಸ್ಯರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಎಸ್.ಜಿ.ಪ್ರಭು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರುಣ ಭಟ್
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,