May 4, 2024

Bhavana Tv

Its Your Channel

ಕಾರ್ಕಳ ಉತ್ಸವದ ವಿದ್ಯುತ್ ದೀಪಾಲಂಕಾರ ಉದ್ಘಾಟನೆಗೊಳಿಸಿದ ಸಚಿವ ಸುನೀಲ್ ಕುಮಾರ್

ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಕಳ ಉತ್ಸವದ ವಿದ್ಯುತ್ ದೀಪಾಲಂಕಾರ ಉದ್ಘಾಟನೆಯನ್ನು ಸಚಿವ ಸುನೀಲ್ ಕುಮಾರ್ ನೇರವೇರಿಸಿದರು

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ನಗರದಲ್ಲಿ ಹತ್ತಕ್ಕೂ ಹೆಚ್ಚು ವಿದ್ಯುತ್ ದೀಪಗಳ ಪ್ರತಿಕೃತಿ ಅಳವಡಿಸಲಾಗಿದ್ದು ನಗರದಲ್ಲಿ42 ಕಿಮೀ ದೂರದವರೆಗೆ ಅಲಂಕಾರ ಮಾಡಲಾಗಿದೆ ಸಾಂಸ್ಕೃತಿಕ ಆಕರ್ಷಣೀಯವಷ್ಟೆ ದೀಪಾಲಂಕಾರವು ಆಕರ್ಷಣೆ ಎಂದರು ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್,ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಉಡುಪಿ ಶಾಸಕ ರಘುಪತಿ ಭಟ್,ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿದರು

ಮೆಸ್ಕಾಂ ತಾಂತ್ರಿಕ ಮುಖ್ಯ ನಿರ್ದೇಶಕ ಮಂಜಪ್ಪ , ಮೆಸ್ಕಾಂ ಮುಖ್ಯ ಅಭಿಯಂತರ ಪದ್ಮಾವತಿ ,ಉತ್ಸವ ಸಮಿತಿಯ ಸದಸ್ಯ ಎಂಕೆ ವಿಜಯ ಕುಮಾರ್ ಗೇರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಣಿರಾಜ್ ಶೆಟ್ಟಿ , ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಾರ್ಕಳ ತಹಸಿಲ್ದಾರ್ ಪ್ರದೀಪ್ ಕುರ್ಡೆಕರ್ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಎಸ್.ವಿ.ಟಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆಪಿ ಶೆಣೈ,ಮೊದಲಾದವರು ಉಪಸ್ಥಿತರಿದ್ದರು ಸುಕುಮಾರ್ ರಾಜು,ರಕ್ಷತ್ ಸಿಂಗ್ , ಬಿಕೆ ಯೊಗೇಶ್ ಎಸ್ ನಾಗೇಶ್ , ಮುರಳಿ ರವೀಂದ್ರ ಮೊಯಿಲಿ ಸ್ವಾಗತಿಸಿದರು, ಸುಮಾರವಿಕಾಂತ್ ಪ್ರಾರ್ಥಿಸಿದರು ನರಸಿಂಹ ಪಂಡಿತ್ ಪ್ರಸ್ತಾವಿಕ ಮಾತನಾಡಿದರು ನಿರೂಪಣೆ ಪ್ರಭಾಕರ್ ಕೊಂಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: