May 6, 2024

Bhavana Tv

Its Your Channel

ಕಾರ್ಕಳದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಬಿತ್ತೋತ್ಸವ ಕಾರ್ಯಕ್ರಮ

ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ಕಾರ್ಕಳ, ಅರಣ್ಯ ಇಲಾಖೆ, ಕಾರ್ಕಳ ಪ್ರಾದೇಶಿಕ ವಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಬಿತ್ತೋತ್ಸವ – 2022 ರ ಕಾರ್ಯಕ್ರಮಗಳು ಕಾರ್ಕಳ ತಾಲೂಕು ನ್ಯಾಯಾಲಯದ ಆವರಣ ಹಾಗೂ ರಾಮಸಮುದ್ರ ಅರಣ್ಯ ಪ್ರದೇಶದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಶ್ರೀ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ಶ್ರೀಮತಿ ಚೇತನ ಎಸ್. ಎಫ್. ಪ್ರಧಾನ ಸಿವಿಲ್ ನ್ಯಾಯಧೀಶರು ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ. ಶ್ರೀಮತಿ ಶೋಭಾ ಎಂ ನಾಯ್ಕ್ ಸಹಾಯಕ ಸರಕಾರಿ ಅಭಿಯೋಜಕರು ಕಾರ್ಕಳ, ಶ್ರೀಮತಿ ಸವಿತಾ ಹೆಗ್ಡೆ ಜೊತೆ ಕಾರ್ಯದರ್ಶಿ ನ್ಯಾಯವಾದಿ ಸಂಘ ಕಾರ್ಕಳ, ಬಿ ದಯಾನಂದ ನಾಯ್ಕ್ ಉಪಾಧ್ಯಕ್ಷರು ನ್ಯಾಯವಾದಿಗಳ ಸಂಘ ಕಾರ್ಕಳ, ಮಂಜುನಾಥ ನಾಯ್ಕ್ ಉಪ ತಹಶೀಲ್ದಾರರು, ಹಾಗೂ ಜಿ.ಡಿ. ದಿನೇಶ್ ವಲಯ ಅರಣ್ಯಧಿಕಾರಿಯವರು ಕಾರ್ಕಳ ಹಾಗೂ ಸಿಬ್ಬಂದಿ ವರ್ಗ ಹಾಗೂ ನ್ಯಾಯವಾದಿಗಳು ಸಾರ್ವಜನಿಕರು ಪಾಲ್ಗೊಂಡಿರುತ್ತಾರೆ. ಕಾರ್ಯಕ್ರಮವನ್ನು ಗಿಡ ನೆಟ್ಟು, ಬೀಜವನ್ನು ಬಿತ್ತುವ ಮೂಲಕ ಆಚರಿಸಲಾಯ್ತು. ಕಾರ್ಕಳ ಕೇಂದ್ರಸ್ಥಾನ ಘಟಕದ ಉಪ ವಲಯ ಅರಣ್ಯಧಿಕಾರಿ ಪ್ರಕಾಶಚಂದ್ರ ಇವರು ಕಾರ್ಯಕ್ರಮವನ್ನು ಸಂಯೋಜಿಸಿ ಧನ್ಯವಾದ ನೀಡಿದರು

error: