ಕಾರ್ಕಳ : ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರನ್ನು ಬೋಳ ಗ್ರಾಮದ ರಸ್ತೆಗೆ ಅಳವಡಿಸಿದ ದೇಶದ್ರೋಹಿಯನ್ನು ತಕ್ಷಣವೇ ಬಂಧಿಸಬೇಕೆAದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆಗ್ರಹಿಸಿದರು.
ಮಂಗಳವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಬೋಳದಲ್ಲಿ ಗೋಡ್ಸೆ ನಾಮಫಲಕ ಅಳವಡಿಸಿದ ಕುರಿತು ತನಿಖೆ ನಡೆದು ಸತ್ಯಾಂಶ ಹೊರಬಂದು ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆಯಾಗಬೇಕೆಂದರು.
ಗೋಡ್ಸೆ ಹೆಸರು ರಸ್ತೆಗಿಡುವ ಮೂಲಕ ರಾಷ್ಟ್ರಪಿತ ಗಾಂಧಿಗೆ ಬಹಳ ದೊಡ್ಡ ಅಪಮಾನ ಮಾಡಲಾಗಿದೆ. ಇದನ್ನು ಪಕ್ಷಭೇದ ಮರೆತು ಪ್ರತಿಯೊಬ್ಬರೂ ಖಂಡಿಸಲೇಬೇಕು. ಸಚಿವ ಸುನೀಲ್ ಕುಮಾರ್ ಅವರು ಇದು ಗ್ರಾಮ ಪಂಚಾಯತ್ನಿAದಾದ ಕೆಲಸವಲ್ಲ ಎಂದು ತಿಳಿಸಿರುತ್ತಾರೆ. ಯಾರಿಂದವೇ ಆಗಲಿ, ಅಂತವರ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ಶಿಕ್ಷೆಗೆ ಒಳಪಡಿಸಬೇಕಿದೆ. ಬೋರ್ಡ್ ಬರೆದವರ ಬಗ್ಗೆಯೂ ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಮುಂದಾಗಬೇಕು. ತಪ್ಪಿತಸ್ಥನ ಬಂಧನವಾಗದೇ ಇದ್ದಲ್ಲಿ ಕ್ಷೇತ್ರದ ಶಾಸಕ, ಸಚಿವ ಸುನೀಲ್ ಕುಮಾರ್ ಅವರು ಮಂತ್ರಿಸ್ಥಾನದಲ್ಲಿರಲು ಅನರ್ಹರು ಎಂದು ಮಮತಾ ಗಟ್ಟಿ ಹೇಳಿದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,