ಕಾರ್ಕಳ:-ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಹಿರಿಯಂಗಡಿ, ವರ್ಷಂಪ್ರತಿ ನಡೆಯುವ ಮಹಾಶಿವರಾತ್ರಿ ಹದಿನಾಲ್ಕನೇ ವಾರ್ಷಿಕ ಜಾತ್ರೋತ್ಸವ ದಿನಾಂಕ 15/02/2023 ಬುಧವಾರ ದಿಂದ 18/02/2023 ನೇ ಶನಿವಾರ ತನಕ ಶ್ರೀ ಮುರಳಿಧರ ತಂತ್ರಿ ಎಡ ಪದವು ತಂತ್ರಿಗಳ ನೇತೃತ್ವದಲ್ಲಿ ಕಲಶಾಭಿಷೇಕ, ನವಕಪ್ರಧನ ಹೋಮ, ಉತ್ಸವ, ಬಲಿ,ರಂಗಪೂಜೆ,ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಶಿವರಾತ್ರಿ ದಿನದಂದು ರಾತ್ರಿ ಶ್ರೀ ಕ್ಷೇತ್ರದ ಧರ್ಮ ದೈವಗಳ ನೇಮೋತ್ಸವ ವಿಜೃಂಭಣೆಯಿAದ ನಡೆಯಿತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು,ಭಕ್ತಾದಿಗಳು ದೇವರ ಸಿರಿ ಮುಡಿ ಗಂಧ ಪ್ರಸಾದ, ಅನ್ನಸಂತರ್ಪಣೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ,ಅರ್ಚಕರು ರಾಜೇಂದ್ರ ಭಟ್,ಗೌರವ ಅಧ್ಯಕ್ಷರು ಸುಂದರ ದೇವಾಡಿಗ,ಹಾಗೂ ಆಡಳಿತ ಮಂಡಳಿಯ ಅದ್ಯಕ್ಷರು,ಕಾರ್ಯದರ್ಶಿ, ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,