May 18, 2024

Bhavana Tv

Its Your Channel

ನಾಮಧಾರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಕ್ಕೆ ಅರ್ಜಿ ಆಹ್ವಾನ

ಭಟ್ಕಳ: ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ, ಭಟ್ಕಳ ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಟ್ಳಳ ತಾಲೂಕಿನ ನಾಮಧಾರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪಿ.ಯುಸಿ, ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಪ್ರಥಮ ವರ್ಷದ ಪಿ.ಯು.ಸಿ. ಪುಸ್ತಕಗಳನ್ನು ಪಡೆಯಲು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಅಂಕ, ವಾಣಿಜ್ಯ ಪುಸ್ತಕಗಳನ್ನು ಪಡೆಯಲು ಶೇಕಡಾ 70% ಹಾಗೂ ಕಲಾ ವಿಭಾಗದ ಪುಸ್ತಕಗಳನ್ನು ಪಡೆಯಲು ಶೇ. 60% ಅಂಕಗಳನ್ನು ಪಡೆದಿರಬೇಕು. ಸರಕಾರಿ ಕಾಲೇಜಿನಲ್ಲಿ ಕಲಿಯುವ ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಾಶಸ್ತö್ಯ ನೀಡಲಾಗುವುದು.
ಅರ್ಜಿಗಳನ್ನು 25/05/2022 ರಿಂದ ವಿತರಿಸಲಾಗುವುದು. ಅರ್ಜಿಗಳನ್ನು ಭರ್ತಿ ಮಾಡಿ 10/06/2022 ಒಳಗಾಗಿ ಸಂಘದ ಕಚೇರಿಗೆ ತಲುಪಿಸಬೇಕಾಗಿ ವಿನಂತಿ
ಅರ್ಜಿಗಳನ್ನು ಪಡೆದುಕೊಳ್ಳಲು ಈ ಕೆಳಗಿನ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಕೆ.ಆರ್. ನಾಯ್ಕ, 9739594474, ಮನಮೋಹನ ನಾಯ್ಕ, 9980431987, ಜಗದೀಶ ನಾಯ್ಕ ,ಬೆಳಕೆ 7892733937, ಶ್ರೀಧರ ನಾಯ್ಕ 9449287211

error: