ಭಟ್ಕಳ: ಕಳೆದ ಸೆ. 17ರಂದು ಸೌದೆ ಸಂಗ್ರಹಿಸಲು ಮನೆಯಿಂದ ಹೊರಟ ಮಹಿಳೆಯೋರ್ವರು ಮನೆಗೆ ಹಿಂದಿರುಗದೇ ನಾಪತ್ತೆಯಾಗಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಕಾಣೆಯಾದ ಮಹಿಳೆಯನ್ನು ಮುರುಡೇಶ್ವರ ನಿವಾಸಿ ಮಾದೇವಿ ಸುಕ್ರಯ್ಯ ದೇವಡಿಗ (57) ಎಂದು ಗುರುತಿಸಲಾಗಿದೆ. ಮನೆಯಿಂದ ಹೋಗುವಾಗ ಮಹಿಳೆಯು ಹಳದಿ ಬಣ್ಣದ ಸೀರೆ, ಕೇಸರಿ ಬಣ್ಣದ ರವಿಕೆ, ಹಳದಿ ಬಣ್ಣದ ಚಪ್ಪಲಿ, ಕೊರಳಲ್ಲಿ ಕರಿಮಣಿ ಸರ, ಕಿವಿಯಲ್ಲಿ ಕಿವಿಯೋಲೆ, ಹಣೆಯಲ್ಲಿ ಕುಂಕುಮ ಧರಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಣೆಯಾದ ಮಹಿಳೆಯ ಮಗ ದಿನೇಶ ಸುಕ್ರಯ್ಯ ದೇವಡಿಗ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿ ಕೊಂಡ ಮುರ್ಡೇಶ್ವರ ಠಾಣೆ ಪಿ.ಎಸೈ ಪರಮಾನಂದ ಕೊಣ್ಣೂರು ಪ್ರತ್ಯೇಕ ತಂಡವನ್ನು ರಚಿಸಿ ಕಳೆದ ಎರಡೂ ಮೂರು ದಿವಸ ದಿಂದ ಕಳೆದು ಹೋದ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಎಷ್ಟೇ ಹುಡುಕಾಟ ನಡೆಸಿದರು ಇನ್ನೂ ಪತ್ತೆ ಯಾಗಿಲ್ಲ ಎಂಬುದೇ ಬೇಸರದ ಸಂಗತಿ ಯಾಗಿದೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.