May 4, 2024

Bhavana Tv

Its Your Channel

ಜನಜಾತಿ ಗೌರವ ದಿವಸ ” ಕಾರ್ಯಕ್ರಮಕ್ಕೆ ಹಲ್ಯಾಣಿ ಹಿರೆಬೇಳು ಗ್ರಾಮದ ನಾಗರಾಜ ಗೊಂಡರ ನೇತ್ರತ್ವದ ದುರ್ಗಾ ಡಕ್ಕೆ ಕುಣಿತ ತಂಡ

ಭಟ್ಕಳ: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರು ಆಯೋಜಿಸದ ” ಜನಜಾತಿ ಗೌರವ ದಿವಸ ” ಕಾರ್ಯಕ್ರಮ ನವೆಂಬರ ೧೫ ರಂದು ಮೈಸೂರಿನಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಲ್ಯಾಣಿ ಹಿರೆಬೇಳು ಗ್ರಾಮದ ನಾಗರಾಜ ಗೊಂಡರ ನೇತ್ರತ್ವದ ದುರ್ಗಾ ಡಕ್ಕೆ ಕುಣಿತ ತಂಡ ಭಾಗವಹಿಸುವ ಅವಕಾಶ ನೀಡಲಾಗಿದೆ. ಈ ಕುರಿತು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ ದುರ್ಗಾ ಡಕ್ಕೆ ಕುಣಿತ ತಂಡಕ್ಕೆ ಆಹ್ವಾನ ನೀಡಲಾಗಿದ್ದು ನವೆಂಬರ ೧೫ ರಂದು ಈ ತಂಡ ಮೈಸೂರಿಗೆ ಪ್ರಯಾಣ ಬೆಳೆಸಲಿದೆ. ಕಳೆದ ಹಲವಾರು ವರ್ಷಗಳಿಂದ ದುರ್ಗಾ ಡಕ್ಕೆ ಕುಣಿತ ತಂಡ ರಾಜ್ಯದ ವಿವಿದೆಡೆ ಹಾಗೂ ಪ್ರತಿಷ್ಠಿತ ದೆಹಲಿಯ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ್ದು ಇವರ ತಂಡಕ್ಕೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕಲಾ ತಂಡದ ಸಂಪರ್ಕ ಸಂಖ್ಯೆ: 9480442512

error: