ಭಟ್ಕಳ ; ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ ಕಳ್ಳನೊರ್ವ ವೃದ್ಧೆಯನ್ನು ಸಾಯಿಸಿ ದರೋಡೆ ಮಾಡಲು ಯತ್ನಿಸಿದ್ದು ಅದ್ರಷ್ಟವಸಾತ್ ವ್ರದ್ದೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಟ್ಕಳ ಮುಂಡಳ್ಳಿ ಜೋಗಿ ಮನೆ ಸಮೀಪ ನಡೆದಿದೆ.
ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಶೋಬಾ ಎಂ ದಿಕ್ಷೀತ (71)ಎಂದು ತಿಳಿದು ಬಂದಿದೆ. ಈಕೆಗೆ ಓರ್ವ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ಉಡುಪಿಯಲ್ಲಿ ವಾಸವಾಗಿದ್ದು .ಸದ್ಯ ಮನೆಯಲ್ಲಿ ವ್ರದ್ದೆ ಒಂದೇ ವಾಸವಾಗಿದ್ದಳು. ಇದನ್ನು ಗಮನಿಸಿ ಕಳ್ಳನೊರ್ವ ಈಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಯ ಮೇಲಿನ ಬಾಲ್ಕಿನಿಯಿಂದ ಬಾಗಿಲಿನ ಕೀಲಿ ತೆಗೆದು ಮನೆಯ ಒಳಗೆ ಇಳಿದು ಬಂದಿದ್ದಾನೆ. ಮನೆಯ ಹಾಲಿನಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡಿದ್ದ ವ್ರದ್ದೆಯ ಕುತ್ತಿಗೆಗೆ ಬಟ್ಟೆಯಿಂದ (ನೈಟಿ) ಸುತ್ತಿ ಎಳೆದು ಹಿಡಿದು ಕೊಲೆ ಮಾಡಲು ಯತ್ನಿಸಿದ ವೇಳೆ ವೃದ್ಧೆ ಕೋಗಾದಿದ್ದಾಳೆ. ನಂತರ ಗಾಬರಿಯಾದ ಕಳ್ಳ ಹಾಗೆಯೇ ಬಿಟ್ಟು ಬಂದ ದಾರಿಗೆ ಸುಂಕವಿಲ್ಲ ಎಂಬAತೆ ಕಳ್ಳ ಪರಾರಿಯಾಗಿದ್ದಾನೆ. ಘಟನೆಯಲ್ಲಿ ವೃದ್ಧೆಯ ಮೋಗಿನ ಬಾಗದಲ್ಲಿ ಚಿಕ್ಕ ಪುಟ್ಟ ಗಾಯವಾಗಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ 15 ದಿನದ ಹಿಂದಷ್ಟೇ ಇವರ ಮನೆಯಲ್ಲಿ ಎರಡು ಚಿನ್ನದ ಬಳೆ, ಒಂದು ಚೈನ್ ,ಒಂದು ಉಂಗುರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈ ಕುರಿತು ವೃದ್ಧೆಯ ಪುತ್ರ ಹರೀಶ ದೀಕ್ಷಿತ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಸಿ.ಪಿ.ಐ ಚಂದನ ಗೋಪಾಲ ತನಿಖೆ ಕೈಗೊಂಡಿದ್ದಾರೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.