May 3, 2024

Bhavana Tv

Its Your Channel

ಡಿ.14 ಮುರ್ಡೇಶ್ವರಕ್ಕೆ ರಾಜ್ಯಪಾಲ ಥಾವರಚಂದ ಗೇಹ್ಲೋಟ್

ಭಟ್ಕಳ : ರಾಜ್ಯಪಾಲ ಥಾವರಚಂದ ಗೇಹ್ಲೋಟ್ ಇವರು ಡಿ.12ರಿಂದ ಡಿ.14ರವರೆಗೆ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಡಿ.14ಕ್ಕೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ಮಾತ್ಹೋಬಾರ ದೇವಸ್ಥಾನಕ್ಕೆ ಬೇಟಿ ನೀಡಲಿದ್ದಾರೆ.

ರಾಜ್ಯಪಾಲರ ಬೇಟಿ ಸಂದರ್ಬದಲ್ಲಿ ಶಿಷ್ಟಾಚಾರದ ಲೋಪದೋಷವಾಗದಂತೆ ಭಟ್ಕಳ ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅಪರಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮುರ್ಡೇಶ್ವರ ದೇವಸ್ಥಾನ ಹಾಗೂ ರಾಜ್ಯಪಾಲರ ವಿಶ್ರಾಂತಿ ಗ್ರಹದ ಬಳಿಯಲ್ಲಿ ಕಂದಾಯ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗೆ ನೀಯೋಜಿಸಿ ಭಟ್ಕಳ ತಹಸೀಲ್ದಾರರು ಆದೇಶ ಹೊರಡಿಸಿದ್ದಾರೆ. ಮಾವಳ್ಳಿ ಕಂದಾಯ ನೀರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ಚರಣಗೌಡ, ಚಾಂದಭಾಷಾ ಮುಲ್ಲಾ, ಕೆ. ಶಂಭು, ಗ್ರಾಮ ಸಹಾಯಕರಾದ ಬಾಬು ನಾಯ್ಕ, ವೆಂಕಟೇಶ ಭಂಡಾರಿ, ಸಂತೋಷ ಮಡಿವಾಳ, ಹರೀಶ ದೇವಾಡಿಗ, ರಾಜು ದೇವಾಡಿಗ ಅವರನ್ನು ನೀಯೋಜಿಸಿದ್ದಾರೆ.

error: