ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಹತ್ತಿರ ನಾಡ ದೋಣಿ ಅವಘಡ ಸಂಭವಿಸಿದೆ.ಇAದು ದಿನಾಂಕ ೦೫-೦೭-೨೦೨೧ ರಂದು ಬೆಳಿಗ್ಗೆ ೦೬:೦೦ ಗಂಟೆ ಸುಮಾರಿಗೆ ಹೊನ್ನಾವರ ಕಾಸರಕೋಡ ಗ್ರಾಮದಿಂದ ನಾಡದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದ ಮೀನುಗಾರಿಕಾ ದೋಣಿ ಸಮುದ್ರದ ಭಾರೀ ಅಲೆಗೆ ಕಾಸರಕೋಡ ಇಕೋ ಬೀಚ್ ಹತ್ತಿರ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಮೀನುಗಾರರಾದ ಉದಯ ದಾಮೋದರ ತಾಂಡೇಲ್ (೩೦.) ಸಮುದ್ರದಲ್ಲಿ ಮುಳುಗಿ ಕಾಣೆಯಾಗಿದ್ದು, ದೋಣಿಯಲ್ಲಿದ್ದ ಇನ್ನುಳಿದ ಮೀನುಗಾರರಾದ ವಿಜಯ್ ಕ್ರಿಸ್ತಾದಾಸ್ ಪರ್ನಾಂಡೀಸ್ (೪೯) ಮಲಬಾರಕೇರಿ ಕಾಸರಕೋಡ ,ಶಂಕರ ಮಾದೇವ ತಾಂಡೇಲ್ (೩೮) ಟೊಂಕ -೧ ಕಾಸರಕೋಡ ಗ್ರಾಮ , ಕಾಮೇಶ್ವರ ದೇವಯ್ಯ ತಾಂಡೇಲ್ ಪ್ರಾಯ (೩೯) ಟೊಂಕ -೧ ಕಾಸರಕೋಡ ಗ್ರಾಮ ಇವರು ಗಳು ಈಜಿಕೊಂಡು ದಡ ಸೇರಿದ್ದು ಸುರಕ್ಷಿತವಾಗಿರುತ್ತಾರೆ.
ಸಮುದ್ರದಲ್ಲಿ ಮುಳುಗಿ ಕಾಣೆಯಾದ ಉದಯ ದಾಮೋದರ ತಾಂಡೇಲ್ (೩೦) ಟೊಂಕ -೧ ಕಾಸರಕೋಡ ಗ್ರಾಮ ಇವರ ಪತ್ತೆ ಕುರಿತು ಪ್ರಯತ್ನ ಮುಂದುವರೆದಿರುತ್ತದೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,