May 19, 2024

Bhavana Tv

Its Your Channel

ಸತೀಶ ತಾಂಡೇಲರಿಗೆ ಹೊಸದಿಗಂತ ಉತ್ತಮ ತಾಲೂಕಾ ವರದಿಗಾರ ಗೌರವ

ಹೊನ್ನಾವರ : ನಾಡಿನ ಜನಪ್ರೀಯ ದಿನಪತ್ರಿಕೆ ಹೊಸ ದಿಗಂತ ಹೊನ್ನಾವರ ವರದಿಗಾರರಾದ ಸತೀಶ ತಾಂಡೇಲ್ ಅವರಿಗೆ ಈ ವರ್ಷದ ಅತ್ಯುತ್ತಮ ತಾಲೂಕಾ ವರದಿಗಾರ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಕಳೆದ ೧೫ ವರ್ಷಗಳಿಂದ ಲೋಕದ್ವನಿ ಮತ್ತು ಹೊಸ ದಿಗಂತ ಪ್ರತಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಮಾಧ್ಯಮ ಲೋಕದಲ್ಲಿ ಗುರುತಿಸಿಕೊಂಡಿರುವ ಸತೀಶ ತಾಂಡೇಲ್ ಅವರು ಸಮಾಜಕ್ಕೆ ಉಪಯೋಗವಾಗಬಲ್ಲ ಸಂಗತಿಗಳನ್ನಷ್ಟೇ ವರದಿ ಮಾಡುವ ಅಪರೂಪದ ವರದಿಗಾರರಾಗಿ ಗುರುತಿಸಿಕೊಂಡಿದ್ದಾರೆ.

ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ,ಕಾರ್ಯದರ್ಶಿಯಾಗಿ ತಾಲೂಕಿನ ಎಲ್ಲಾ ಮಾದ್ಯಮ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಸತೀಶ ತಾಂಡೇಲ್ ಅವರು ಎಲ್ಲಾ ಕಡೆ ಸಲ್ಲುವ ವ್ಯಕ್ತಿಯಾಗಿದ್ದಾರೆ. ಸತೀಶ ತಾಂಡೇಲ್ ಉತ್ತಮ ತಾಲೂಕಾ ವರದಿಗಾರ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಅವರ ಹಿತೈಷಿಗಳು ಹಾಗೂ ತಾಲೂಕಿನ ಪತ್ರಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

error: