ಹೊನ್ನಾವರ ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ, ವಕೀಲರ ಸಂಘ, ಹೊನ್ನಾವರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ, ಸ್ವಾತಂತ್ಯೋತ್ಸವದ, ಅಮೃತ ಮಹೋತ್ಸವದ ಅಂಗವಾಗಿ, ನಡೆಯುತ್ತಿರುವ, ಸರಣಿ ಕಾನೂನು ಅರಿವು ನೆರವು ಅಭಿಯಾನವು ಶನಿವಾರ, ಸರ್ಕಾರಿ ಸಂಯುಕ್ತ ಪ.ಪೂ.ಕಾಲೇಜು, ಅಳ್ಳಂಕಿಯಲ್ಲಿ ನಡೆಯಿತು.
ಹೊನ್ನಾವರ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ಕಾರಿ ಸಂಯುಕ್ತ ಪ.ಪೂ.ಕಾಲೇಜು, ಅಳ್ಳಂಕಿಯ ಉಪ ಪ್ರಾಂಶುಪಾಲ ಹರಿಶ್ಚಂದ್ರ ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಕೀಲರ ಸಂಘದ ಅಧ್ಯಕ್ಷ ಜಿ.ವಿ. ಭಟ್ಟ, ಕಾರ್ಯದರ್ಶಿ ಮನೋಜ ಎಮ್. ಜಾಲಿಸತ್ಗಿ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯಾಯಾಧೀಶ ಜಿ.ಬಿ ಹಳ್ಳಾಕಾಯಿ ಜನನ ಮರಣ ನೋಂದಣಾ ಕಾಯ್ದೆ, ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು ನ್ಯಾಯವಾದಿ ಉದಯ ಬಿ. ನಾಯ್ಕ, ಮೋಟಾರು ವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’