May 4, 2024

Bhavana Tv

Its Your Channel

ಅಪಘಾತ : ಎರಡು ಬೈಕ್, ಕಾರು ಜಖಂ : ಸವಾರರಿಗೆ ಪೆಟ್ಟು

ಅಪಘಾತ ಸ್ಥಳದಲ್ಲಿ ಸ್ಪಂದಿಸಿದ ಮಾಜಿ ಶಾಸಕ ಮಂಕಾಳ ವೈದ್ಯ.

ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ತಿರುವಿನಲ್ಲಿ ಒಂದು ಕಾರು, ಎರಡು ಬೈಕ್ ಗಳ ನಡುವೆ ಅಪಘಾತವಾಗಿ ಬೈಕ್ ಮತ್ತು ಕಾರು ಜಖಂ ಆಗಿದ್ದು, ಗಾಯಗೊಂಡ ಬೈಕ್ ಮತ್ತು ಕಾರಿನ ಸವಾರರು ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೬೯ರಲ್ಲಿ ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಕಾರು ಚಾಲಕನ ಅತಿವೇಗ ಮತ್ತು ನಿರ್ಲಕ್ಷದಿಂದ ಖರ್ವಾ ಕ್ರಾಸ್ ಹತ್ತಿರ ಒಮ್ಮೇಲೆ ಕಾರನ್ನು ಬಲಬದಿಗೆ ತಿರುಗಿಸಿ ಆ ಮಾರ್ಗವಾಗಿ ಬರುತ್ತಿದ್ದ ಎರಡು ಬೈಕ್ ಗೆ ಹೊಡೆದು ಬೈಕ್ ಜಖಂ ಗೊಳಿಸಿ ಕಾರು ಕೂಡ ಗಟಾರಕ್ಕೆ ಬಿದ್ದು ಹಾನಿ ಉಂಟಾಗಿದೆ.

ಜಾಹಿದ್ ಖಾಜಾ ಅಪ್ಕರ್ ಹೆರಂಗಡಿ, ಜುಲಫಿಕರ್ ಖಾಜಾ ಜುವಾಪು ಹೆರಂಗಡಿ, ಶಿವಯ್ಯ ಮಹಾಲಿಂಗಯ್ಯ ಗಣಾಚಾರಿ ಗದಗ, ದೀಕ್ಷಿತ್ ಪ್ರಭು ಬೆಂಗಳೂರು ಅಪಘಾತದಲ್ಲಿ ಗಾಯಗೊಂಡು ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬoಧ ಪಟ್ಟಂತೆ ಕಾರಿನ ಚಾಲಕ ನಾಗದೇವನಹಳ್ಳಿ, ಬೆಂಗಳೂರಿನ ಅಜೇಯ ಕೆ. ಎಂ. ವಿರುದ್ಧ ಹೆರಂಗಡಿಯ ರಿಯಾಜ್ ಹಸನ ಅಪ್ಕರ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಪಘಾತ ಸ್ಥಳದಲ್ಲಿ ಸ್ಪಂದಿಸಿದ ಮಾಜಿ ಶಾಸಕ ಮಂಕಾಳ ವೈದ್ಯ : ಗೇರುಸೊಪ್ಪದಲ್ಲಿರುವ ಕಾರ್ಯಕ್ರಮದ ನಿಮಿತ ಅದೇ ಮಾರ್ಗದಲ್ಲಿ ಪ್ರಯಾಣದಲ್ಲಿದ್ದ ಮಾಜಿ ಶಾಸಕ ಮಂಕಾಳ ವೈದ್ಯರವರು, ಅಪಘಾತ ನಡೆದ ಸ್ಥಳದಲ್ಲಿ ಸಕಾಲದಲ್ಲಿ ಸ್ಪಂದಿಸಿ ಪೆಟ್ಟಾದವರಿಗೆ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.

ಬೈಕ್ ಸವಾರರು ಮತ್ತು ಕಾರಿನಲ್ಲಿದ್ದವರಿಗೆ ತುಂಬಾ ಪೆಟ್ಟಾಗಿ ನರಳುತ್ತಿದ್ದರು. ಮಂಕಾಳ ವೈದ್ಯರು ಸಕಾಲದಲ್ಲಿ ಎರಡು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳುಗಳು ಆಸ್ಪತ್ರೆಗೆ ಹೋಗುವ ತನಕ ಅಲ್ಲೇ ಇದ್ದು ಮುಂದಿನ ಪ್ರಯಾಣ ಬೆಳೆಸಿದ್ದಾರೆ. ಅವರ ಜೊತೆ ಇದ್ದ ರಾಜು ನಾಯ್ಕ ಮಂಕಿ, ಕೃಷ್ಣ ಗೌಡ ಮಾವಿನಮುರ್ವ, ಅಣ್ಣಯ್ಯ ನಾಯ್ಕ, ಮಂಕಾಳ್ ವೈದ್ಯರ ಅಂಗರಕ್ಷಕ ಅನೂಪ್ ಆಚಾರಿ, ಸ್ಥಳೀಯರು ತಕ್ಷಣ ಸ್ಪಂದಿಸಿದರು.

error: