ವರದಿ: ವೆಂಕಟೇಶ ಮೇಸ್ತ ಹೊನ್ನಾವರ
ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಒಂಬತ್ತು ಬೋಟ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಂದಾಯ ಇಲಾಖೆ, ಪೊಲೀಸ್, ಅರಣ್ಯ ಮತ್ತು ಭೂ, ಗಣಿ ಇಲಾಖೆಯ ಜಂಟಿ ಕಾರ್ಯಾಚರಣೆಯೊಂದಿಗೆ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ಗಾರಿಕೆಗೆ ಬಳಸುತ್ತಿದ್ದ ಒಂಬತ್ತು ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾವಿನಕುರ್ವಾ, ಹೊಸಾಡ, ಕಳಿಸಿನಮೋಟೆ, ಕಾಸರಕೋಡ, ಹೊಸಪಟ್ಟಣ ಹೀಗೆ ಶರಾವತಿ ನದಿ ಅಂಚಿನಲ್ಲಿರುವ ಜಿಪಿಎಸ್ ಇಲ್ಲದೇ ಅಕ್ರಮ ಮರಳು ಸಾಗಿಸಲು ಬಳಕೆಯಾಗುತ್ತಿದ್ದ ಬೋಟ್ಗಳ ಮೇಲೆ ದಾಳಿ ಮಾಡಿ ಒಟ್ಟು ಒಂಬತ್ತು ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟು ದಿನ ಅಧಿಕಾರಿಗಳ ಕಣ್ಣು ತಪ್ಪಿಸಿ ನಡೆಯತ್ತಿದ್ದ ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಈ ದಾಳಿಯಲ್ಲಿ ಸಿಪಿಐ ಶ್ರೀಧರ ಎಸ್. ಆರ್, ಪಿ. ಎಸ್. ಐ ಶಶಿಕುಮಾರ, ಕಂದಾಯ, ಅರಣ್ಯ, ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಪರವಾನಿಗೆ ಪಡೆದ ೪೫ ಮರಳು ದಿಬ್ಬಗಳಿವೆ. ಅವರಿಗೆ ಇನ್ನೂ ಕೂಡ ಮರಳುಗಾರಿಕೆಯ ಅನುಮತಿ ಸರಕಾರ ಕೊಟ್ಟಿಲ್ಲ. ಇದನ್ನು ಅವಲಂಬಿಸಿದ ಲಾರಿ, ಬೋಟ್ ಗಳಿಗೂ ಕೂಡ ಕೆಲಸವಿಲ್ಲ. ಇದರಿಂದ ಸರಕಾರಕ್ಕೂ ರಾಜ ದನ ನಷ್ಟವಾಗುತ್ತಿದೆ.
ಇನ್ನೂ ಕೂಡ ಪರವಾನಿಗೆ ಪಡೆದ ಮರಳುಗಾರಿಕೆಗೆ ಅನುಮತಿ ನೀಡದೆ ಇರುವುದು ನೋಡಿದರೆ, ಹೊಸದಾಗಿ ಮರಳುಗಾರಿಕೆಗೆ ಅನುಮತಿ ಪಡೆಯಲು ಲಾಭಿ ಮಾಡುತ್ತಿದ್ದಾರೆಯೇ ಅನ್ನುವ ಅನುಮಾನ ಹುಟ್ಟುಕೊಂಡಿದೆ. ಈ ಹಿಂದೆ ಆಡಳಿತದಲ್ಲಿ ಇದ್ದ ಸರಕಾರದ ಬೆಂಬಲಿತರೆ ಹೆಚ್ಚು ಪರ್ಮಿಟ್ ಹೊಂದಿದ್ದಾರೆ. ಈ ಆಡಳಿತದಲ್ಲಿ ಇದ್ದವರು ಕೂಡ ಅವಕಾಶ ಸಿಕ್ಕಿದ್ದಾಗ ತಮ್ಮ ಕೆಲಸ ಆಡಿಕೊಳ್ಳಬೇಕು ಎಂದು, ಹೊಸ ಮರಳು ಪರ್ಮಿಟ್ಗೆ ಲಾಭಿ ನಡೆಸಿದ ಅನುಮಾನ ಕಾಡುತ್ತಿದೆ
ಅಧಿಕೃತ ಪರವಾನಿಗೆ ಇದ್ದ ಮರಳುಗಾರಿಕೆಗೆ ಅನುಮತಿ ನೀಡಬೇಕು. ಅಕ್ರಮ ಮರಳು ಗಾರಿಕೆಗೆ ಅವಕಾಶ ನೀಡಬಾರದು. ಇದರಿಂದ ಸರಕಾರಕ್ಕೆ ರಾಜದನವು ನಷ್ಟವಾಗುತ್ತದೆ ಎಂಬುದು ಅಧಿಕೃತ ಗುತ್ತಿಗೆದಾರರ ಅಭಿಪ್ರಾಯವಾಗಿದೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,