April 28, 2024

Bhavana Tv

Its Your Channel

ಸಮಾಜದ ಸ್ವಾಸ್ತ ಹದಗೆಡಿಸುತ್ತಿರುವ ಬಿ.ಜೆ.ಪಿ. ….. ಮಾಜಿ ಶಾಸಕಿ ಶಾರದಾ ಶೆಟ್ಟಿ.

ಹೊನ್ನಾವರ : ನಾಲ್ಕು ವರ್ಷ ಕಳೆದು ಇನ್ನೊಂದುಚುನಾವಣೆ ಸಮಿಪಿಸುತ್ತಿದ್ದರೂ, ಬಿ.ಜೆ.ಪಿ. ಸರ್ಕಾರ ಯಾವುದೇ ಅಭಿವೃದ್ಧಿ ಕೈಗೊಳ್ಳದೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಗಾಳಿಗೆ ತೂರುತ್ತಿದೆ ಎಂದು ಕುಮಟಾ-ಹೊನ್ನಾವರ ವಿಧಾನ ಸಭಾಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಆಪಾದಿಸಿದರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಏರ್ಪಡಿಸಿದ ಮತಗಟ್ಟೆ ಸಮಿತಿ ರಚನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ.ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಜನರ ಬಾಳು ದುಸ್ತರವಾಗಿದೆ ಎಂದರು.ಬಿ.ಜೆ.ಪಿ.ಸರ್ಕಾರ ತನ್ನ ಎಲ್ಲಾ ತಪ್ಪುಗಳನ್ನು ಮರೆಮಾಚಲು ಜನರ ಬಾವನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ತö್ಯವನ್ನು ಹದಗೆಡಿಸುತ್ತಿದೆ ಎಂದು ಅವರು ಆರೋಪಿಸಿದರು.

ಜಿಲ್ಲಾಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಪಕ್ಷದ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿ.ಜೆ.ಪಿ.ಪಕ್ಷ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಈಗ ಎಲ್ಲವನ್ನು ಮರೆತಿದೆ ಎಂದರು. ಸಿದ್ಧರಾಮಯ್ಯ ಸರ್ಕಾರ ಪರೇಶ ಮೇಸ್ತನ ಪ್ರಕರಣವನ್ನು ಅವರ ತಂದೆ-ತಾಯಿಯ ಒತ್ತಾಯದ ಮೇರೆಗೆ ಸಿ.ಬಿ.ಐ.ತನಿಖೆಗೆ ನೀಡಿದ್ದರೂ, ಕೇಂದ್ರದ ಮೋದಿ ಸರ್ಕಾರದ ಅಧೀನದಲ್ಲಿರುವ ಸಿ.ಬಿ.ಐ. ನಿಂದ ಪರೇಶ ಮೇಸ್ತನಿಗೆ ನ್ಯಾಯ ಸಿಗುವುದು ಮರಿಚಿಕೆಯಾಗಿದೆ ಎಂದರು.  ಈ ಕುರಿತಂತೆ ಬಿ.ಜೆ.ಪಿ.ಯ ಶಾಸಕರು ಮತ್ತು ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಪಾದಿಸಿದರು.
error: