April 26, 2024

Bhavana Tv

Its Your Channel

ಶ್ರೀ ವಂದಡಿಕೆ ಶಂಭುಲಿoಗೇಶ್ವರ ಹಾಗೂ ಶ್ರೀ ಕರಿಕಾನ ಪರಮೇಶ್ವರಿ ದೇವಿಯ ಮಹಾದ್ವಾರ ಲೋಕಾರ್ಪಣೆ

ಹೊನ್ನಾವರ: ಶ್ರೀ ವಂದಡಿಕೆ ಶಂಭುಲಿAಗೇಶ್ವರ ಹಾಗೂ ಶ್ರೀ ಕರಿಕಾನ ಪರಮೇಶ್ವರಿ ದೇವಿಯ ಮಹಾದ್ವಾರ ಸ್ಥಾಪನೆ ಒಂದು ಪರ್ವ ಕಾಲದ ಶುಭಾರಂಭವಾಗಿದೆ ಎಂದು ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ತಾಲೂಕಿನ ಅರೆಅಂಗಡಿಯಲ್ಲಿ ಶ್ರೀಕರಿಕಾನ ಪರಮೇಶ್ವರೀ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಶಿಲಾಮಯ ಮಹಾದ್ವಾರವನ್ನು ಲೋಕಾರ್ಪಣೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮುಂದಿನ ದಿನಗಳಲ್ಲಿ ಇಡೀ ದೇವಾಲಯವು ಶಿಲಾಮಯ ದೇವಾಲಯವಾಗಬೇಕು. ಅದಕ್ಕೆ ಇದು ಪೀಠಕೆಯಾಗಬೇಕು. ದಟ್ಟವಾದ ಕಾನಿನ ಮಧ್ಯದಲ್ಲಿ ಬೆಳಕಿನ ರೇಖೆಯಾಗಿ ಕಂಗೊಳಿಸುವ ಪರಮೇಶ್ವರೀ. ದೇವರೆಷ್ಟು ಮುಖ್ಯವೋ ದ್ವಾರವೂ ಅಷ್ಟೇ ಮುಖ್ಯ. ದ್ವಾರದ ಮೂಲಕವೇ ದೇವರ ದರ್ಶನ. ಗುರು ಮತ್ತು ಗೋವಿಂದ ಒಟ್ಟಿಗೇ ಪ್ರತ್ಯಕ್ಷರಾದರೆ ಯಾರಿಗೆ ಮೊದಲು ಪ್ರಣಾಮ. ಮೊದಲ ಪ್ರಣಾಮ ಗುರುವಿಗೆ ಯಾಕೆಂದರೆ ಗುರುವಿದ್ದರೆ ಗೋವಿಂದನ ದರ್ಶನ. ಗುರು ಎಂದರೆ ದ್ವಾರ. ಗುರುವಿಗೆ ಎಷ್ಟು ಪ್ರಾಮುಖ್ಯವೆಂದರೆ ಗುರುವನ್ನು ಬ್ರಹ್ಮ, ವಿಷ್ಣು,ಮಹೇಶ್ವರ ಪರಬ್ರಹ್ಮ ಎಂದಿದ್ದಾರೆ.
ಶ್ರೀಕರಿಕಾನ ಪರಮೇಶ್ವರಿಗೆ ಶಾಶ್ವತವಾದ ಶಿಲಾಮಯ ದ್ವಾರ ನಿರ್ಮಾಣವಾಗಿದೆ. ಕರಿಕಾನ ಪರಮೇಶ್ವರೀ ಕಲ್ಲಿನ ಬಿಂಬ. ಕಲ್ಲೇ ದೇವಿಯ ರೂಪದಲ್ಲಿ ಒಡಮೂಡಿದ್ದಾಗಿದೆ. ಮನುಷ್ಯ ಕೆತ್ತಿದ ಕಲ್ಲು ಅಲ್ಲ. ಸಹಜವಾಗಿ, ನೈಸರ್ಗಿಕವಾಗಿ ದಟ್ಟ ಕಾನನದ ಮಧ್ಯೆ ಒಡಮೂಡಿದ ದೇವಿ. ಶಿಲೆಯೇ ದೇವರಾಗಿ ಬಂದಿದೆ. ಶಿಲೆಯ ಮಹಾದ್ವಾರ ಸರಿಯಾದುದು ಎಂದು ನುಡಿದರು. ಕಾರ್ಯ ಮಾಡಿದರೆ ನೂರ್ಕಾಲ ಉಳಿಯುವಂತಹ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಿಲಾಶಾಸನ ಫಲಕ ಅನಾವರಣ ಮಾಡಿ ಮಾತನಾಡಿ ಬದಲಾದ ಭಾರತದಲ್ಲಿ ಹಿಂದು ಧರ್ಮ ಬಲಿಷ್ಠವಾಗುತ್ತಿದೆ. ರಾಮ ಮಂದಿರ ನಿರ್ಮಾಣದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಈಗ ಅದು ನಿರ್ಮಾಣಾಗುತ್ತಿದೆ ಎಂದರು.
ಗೋಶಾಲೆ ತೆರಯಲು ಸರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತದೆ. ಆಮಿಶ, ಒತ್ತಡ, ವಂಚನೆಯ ಮೂಲಕ ಮತಾಂತರ ಮಾಡಬಾರದು ಎಂಬ ಸರಳ ದೃಷ್ಠಿಯಿಂದ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ ಎಂದರು.
ಪ್ರತಿದೇವಸ್ಥಾನಗಳೂ ಸಮಾಜ ಕಟ್ಟುವ ಕೇಂದ್ರಗಳಾಗಬೇಕು. ದೇವಸ್ಥಾನದ ಹಣವನ್ನು ಸಮಾಜ ಕಟ್ಟುವ ಕಾರ್ಯಕ್ಕೆ ಸದ್ವಿನಿಯೋಗ ಆಗಬೇಕು. ಈ ನಿಟ್ಟಿನಲ್ಲಿ ಸಪ್ತಪದಿ ಕಾರ್ಯಕ್ರಮ ತರಲಾಗಿದೆ. ಒಂದು ದೇವಸ್ಥಾನದ ಜೀರ್ಣೋದ್ದಾರ ಆ ಗ್ರಾಮದ ಜನರ ಆತ್ಮಸ್ಥೈರ್ಯ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ ಸೌರ ವಿದ್ಯುತ್ ಉದ್ಘಾಟಿಸಿ ಮಾತನಾಡಿ ಬಿಜೆಪಿ ಸರಕಾರದಲ್ಲಿ ಅನೇಕ ಹೊಸ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಡವರಿಗ ಶಕ್ತಿ ತುಂಬುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಶ್ರೀ ಕರಿಕಾನ ಪರಮೇಶ್ವರೀ ದೇವಸ್ಥಾನ ಶಕ್ತಿ ಸ್ಥಳವಾಗಿದೆ ಎಂದರು. ರಾಘವೇಶ್ವರ ಶ್ರೀಗಳು ಹೇಳಿದಂತೆ ಹೊಸಾಡ ಗೋ ಶಾಲೆಗೆ ರಸ್ತೆ, ಗೋಕರ್ಣ ವಿಷ್ಣು ಗುಪ್ತ ವಿಶ್ವವಿದ್ಯಾಲಯದ ವರೆಗಿನ ರಸ್ತೆ ಕಾರ್ಯವನ್ನು ಚಾಚೂ ತಪ್ಪದೇ ಮಾಡಿರುವುದಾಗಿ ತಿಳಿಸಿದರು.
ವಿದ್ವಾಂಸ ಕಟ್ಟೆ ಪರಮೇಶ್ವರ ಭಟ್, ಜಿ.ಪಂ. ಮಾಜಿ ಸದಸ್ಯ ಕಡತೋಕಾ ಶಿವಾನಂದ ಹೆಗಡೆ, ಉದ್ಯಮಿ ಜಿ.ಜಿ.ಶಂಕರ, ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಮಾತನಾಡಿದರು.

ಬೆಳ್ಳಿಕಿರೀಟ ಸನ್ಮಾನ: ಯಕ್ಷಗಾನ ಕಲಾವಿದ ನೀಲಕೋಡ ಶಂಕರ ಹೆಗಡೆ ಯಕ್ಷಗಾನ ರಂಗ ಪ್ರವೇಶ ಮಾಡಿ ರಜತ ವರ್ಷ ಸಂದಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನೀಡಿದ ಬೆಳ್ಳಿ ಕಿರೀಟವನ್ನು ಶ್ರೀ ರಾಘವೇಶ್ವರ ಶ್ರೀಗಳು ತೊಡಿಸಿ ಸನ್ಮಾನಿಸಿದರು.
ಮಹಾದ್ವಾರ ನಿರ್ಮಾಣಕ್ಕೆ ಒಂದು ಲಕ್ಷ ರೂ. ಗಳಿಗಿಂತ ಹೆಚ್ಚು ಹಣ ಸಹಾಯ ಮಾಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ನೀಲಕೋಡ ಶಂಕರ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.

error: