May 29, 2024

Bhavana Tv

Its Your Channel

ನಾಳೆ ಗುಣವಂತೆ ಯಕ್ಷಂಗಣದಲ್ಲಿ ಮಾಸದ ಆಟ “ಶ್ರೀ ಕೃಷ್ಣ ಸಂಧಾನ”

ಗುಣವoತೆ:- ದಿ:13-08-2022 ಸಂಜೆ 6 ಗಂಟೆಗೆ ಸರಿಯಾಗಿ ಶನಿವಾರ ಗುಣವಂತೆ ಯಕ್ಷಂಗಣದಲ್ಲಿ ಈ ತಿಂಗಳ ಮಾಸದ ಆಟ ನಡೆಯಲಿದೆ. ಈ ಸಲದ ಮಾಸದ ಆಟ ಇಡಗುಂಜಿ ಮೇಳದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ “ಶ್ರೀ ಕೃಷ್ಣ ಸಂಧಾನ” ಪ್ರಯೋಗ ನಡೆಯಲಿದೆ. ಈ ಆಟವನ್ನು ಮಂಗಳೂರಿನ ಉದ್ಯಮಿ ಕಲಾಪ್ರೇಮಿ ಪರೇಶ ನರೇಂದ್ರ ಇವರು ಪ್ರಾಯೋಜಿಸಲಿದ್ದಾರೆ. ಪ್ರತಿ ಮಾಸದ ಆಟವನ್ನೂ ಯಕ್ಷಗಾನ ಅಭಿಮಾನಿಗಳ ಪ್ರಾಯೋಜಕತ್ವವನ್ನು ಪಡೆದು ನಡೆಸಲಾಗುತ್ತಿದ್ದು ಎಲ್ಲರಿಗೂ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುತ್ತದೆ. ಮಾಸದ ಆಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಬರಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

error: