May 19, 2024

Bhavana Tv

Its Your Channel

ರವಿವಾರ ಸುಧನ್ವಾರ್ಜುನ ಕಾಳಗ ತಾಳಮದ್ದಳೆ

ಹೊನ್ನಾವರ: ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ ಮತ್ತು ಒಕ್ಕಲಿಗ ಯಕ್ಷಗಾನ ಬಳಗ (ರಿ.) ಹೊನ್ನಾವರ(ಉ.ಕ.) ಇವುಗಳ ಸಂಯುಕ್ತಆಶ್ರಯದಲ್ಲಿ ಹೊನ್ನಾವರದಲ್ಲಿ ಸುಧನ್ವಾರ್ಜುನ ಕಾಳಗ ತಾಳಮದ್ದಳೆ ಯು ದಿನಾಂಕ : 28-08-2022 ರಂದು ರವಿವಾರ ಹಗಲು 4-00 ರಿಂದ ಸಂಜೆ 7-00 ರವರೆಗೆ ಸ್ಫೂರ್ತಿರಂಗ ಕಾರ್ಯಾಲಯ, “ನಮ್ಮನೆ” ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ನಡೆಯಲಿದೆ

ಹಿಮ್ಮೇಳ ದಲ್ಲಿ ಭಾಗವತರಾಗಿ : ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ, ಹಳದೀಪುರ, ಶ್ರೀ ಗಣೇಶಯಾಜಿ, ಮಾವಿನಕೆರೆ, ಇಡಗುಂಜಿ, ಮದ್ದಳೆ ಮತ್ತುಚಂಡೆ : ಶ್ರೀ ಶ್ರೀಪಾದ ಭಟ್ಟ ಕಡತೋಕಾ, ಶ್ರೀ ಪಿ.ಕೆ.ಹೆಗಡೆ ಹರಿಕೇರಿ ಮತ್ತುಕುಮಾರ ಮಯೂರ, ಹರಿಕೇರಿ, ಪಾತ್ರಧಾರಿಗಳು :ಅರ್ಜುನ : ಶ್ರೀ ಅಣ್ಣಪ್ಪಗೌಡ, ಮಾಗೋಡ, ಸುಧನ್ವ :ಶ್ರೀ ನಾಗೇಶ ಗೌಡ, ಕುಳಿಮನೆ. ಪ್ರಭಾವತಿ : ಶ್ರೀ ರಾಮಗೌಡ, ಗುಣವಂತೆ. ಕೃಷ್ಣ : ಶ್ರೀ ಮಂಜುಗೌಡ, ಹಕ್ಕಲಕೇರಿ.ವೃಷಕೇತು : ಶ್ರೀ ಸುಬ್ರಹ್ಮಣ್ಯಗೌಡ, ಕಾನಗೋಡ, ಪ್ರದ್ಯುಮ್ನ :ಶ್ರೀ ಮಂಜುಗೌಡ, ಹೊಳ್ಳಾಕುಳಿ ವಹಿಸಲಿದ್ದಾರೆ. ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಳಮದ್ದಳೆ ವೀಕ್ಷಿಸಬೇಕೆಂದು ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ ಮತ್ತು ಡಾ.ಎಸ್. ಡಿ. ಹೆಗಡೆ, ಯಕ್ಷರಂಗ ಮಾಸಪತ್ರಿಕೆ, ಒಕ್ಕಲಿಗ ಯಕ್ಷಗಾನ ಬಳಗ (ರಿ.) ಹೊನ್ನಾವರ(ಉ.ಕ.),ಸ್ಫೂರ್ತಿರಂಗ ಹೊನ್ನಾವರ ಇದರ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ತಿಳಿಸಿದ್ದಾರೆ

error: