May 20, 2024

Bhavana Tv

Its Your Channel

ಶಾಸಕರಾಗಿ ಮಂಕಾಳ ವೈದ್ಯ ಗೆಲುವು, ಧರ್ಮಸ್ಥಳಕ್ಕೆ ಪಾದಯಾತ್ರೆ ಹರಕೆ ತೀರಿಸಿದ ಹೊನ್ನಾವರದ ಅಭಿಮಾನಿ

ಹೊನ್ನಾವರ ; ಭಟ್ಕಳ ಹೊನ್ನಾವರ ಕ್ಷೇತ್ರಕ್ಕೆ ತನ್ನ ನೆಚ್ಚಿನ ನಾಯಕನ ಗೆಲುವಿಗೆ ಹರಕೆ ಹೊತ್ತ ತಾಲೂಕಿನ ಕಾಸರಕೋಡ್ ಯುವಕ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು ನೆಚ್ಚಿನ ನಾಯಕನಿಗಾಗಿ ತಾನು ಹೊತ್ತಿದ್ದ ಹರಕೆ ತೀರಿಸಿದ್ದಾನೆ.
ತಾಲೂಕಿನ ಕಾಸರಕೋಡ್ ನಿವಾಸಿ ಮೀನುಗಾರ ಮುಖಂಡ ರಾಜು ತಾಂಡೇಲ್ ಭಟ್ಕಳ/ ಹೊನ್ನಾವರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮಂಕಾಳ ವೈದ್ಯ ಗೆಲುವು ಸಾಧಿಸಿದರೆ ಪಾದಯಾತ್ರೆಯ ಮೂಲಕ ಬಂದು ಶ್ರೀ ಮಂಜುನಾಥನ ದರ್ಶನ ಮಾಡುವುದಾಗಿ ಹರಕೆ ಹೊತ್ತಿದ್ದರು. ಮಂಕಾಳ ವೈದ್ಯ ಗೆದ್ದು ಶಾಸಕರಾಗಿ, ಸಚಿವರಾದ ತರುವಾಯ ತನ್ನ ಹರಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದರ್ಶನಕ್ಕೆ ಜೂನ್.19 ರಂದು ಪಾದಯಾತ್ರೆ ಕೈಗೊಂಡು ಜೂನ್ 25 ರಂದು ಧರ್ಮಸ್ಥಳಕ್ಕೆ ತಲುಪಿ ದೇವರ ದರ್ಶನ ಪಡೆದು ತಮ್ಮ ಹರಕೆ ಪೂರೈಸಿದರು. ಧರ್ಮಸ್ಥಳದಿಂದ ತಂದ ಪ್ರಸಾದವನ್ನು ಸಚೀವರಾದ ಮಂಕಾಳ ವೈದ್ಯ ಮನೆಗೆ ತೆರಳಿ ವಿತರಿಸಿದರು.

error: