May 5, 2024

Bhavana Tv

Its Your Channel

ಬೆಳೆ ರಕ್ಷಣೆಯ ಬಂದೂಕು ಲೈಸೆನ್ಸ್ ನವೀಕರಣಕ್ಕಾಗಿ ಠಾಣಾ ಮಟ್ಟದಲ್ಲಿಯೇ ಪೊಲೀಸ್ ನಿರಾಕ್ಷೇಪಣಾ ವರದಿ

ಕಾರವಾರ: ಜಿಲ್ಲೆಯಲ್ಲಿ ಬೆಳೆ ರಕ್ಷಣೆಯ ಬಂದೂಕು ಲೈಸೆನ್ಸ್ ನವೀಕರಣಕ್ಕಾಗಿ ಠಾಣಾ ಮಟ್ಟದಲ್ಲಿಯೇ ಪೊಲೀಸ್ ನಿರಾಕ್ಷೇಪಣಾ ವರದಿ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಿಂದ ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆ ರಕ್ಷಣೆಗೆ ಸಂಬAಧಿಸಿದ ಬಂದೂಕು ಲೈಸೆನ್ಸ್ ಗಳ ನವೀಕರಣಕ್ಕಾಗಿ ಲೈಸೆನ್ಸದಾರರು ತಮ್ಮ ಲೈಸೆನ್ಸ್ ಅವಧಿಯು ಮುಗಿಯುವ ಮುಂಚಿತವಾಗಿ ಸಂಬAಧಪಟ್ಟ ವ್ಯಾಪ್ತಿಯ ಪೋಲಿಸ್ ಠಾಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಠಾಣಾಧಿಕಾರಿಯವರು ಆಯುಧ ನಿಯಮಾವಳಿಯಂತೆ ಎಸ್-4 ನಮೂನೆಯಲ್ಲಿ ಭರ್ತಿ ಮಾಡಿ ಅರ್ಜಿದಾರರಿಗೆ ನೀಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರರವರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

error: