May 4, 2024

Bhavana Tv

Its Your Channel

ಹೆಂಡತಿಯ ಶವವನ್ನು ನೀರಿನ ಬ್ಯಾರಲ್ ನಲ್ಲಿ ಬಚ್ಚಿಟ್ಟು ಅದನ್ನು ಸಾಗಿಸಲು ಹೋಗಿ ಪೋಲೀಸರ ಅತಿಥಿಯಾದ ಗಂಡ

ಕಾರವಾರ :- ದಂಪತಿಗಳ ನಡುವೆ ನಂಬಿಕೆ ಎನ್ನುವುದು ಕಳಚಿ ಬಿದ್ರೆ ಆ ಸಂಸಾರ ಒಡೆದುಹೋಗುತ್ತದೆ. ಆದ್ರೆ ಈ ಅಪನಂಬಿಕೆಯೇ ಇದೀಗ ಗೃಹಿಣಿಯ ಹತ್ಯೆಗೆ ಕಾರಣವಾಗಿದ್ದು ಗಂಡ ಎನಿಸಿಕೊಂಡ ಭೂಪ ನೀರು ತುಂಬಿಸುವ ಬ್ಯಾರಲ್ ನಲ್ಲಿ ಆಕೆಯ ಶವ ಬಚ್ಚಿಟ್ಟು ಅದನ್ನು ಸಾಗಿಸಲು ಹೋಗಿ ಪೋಲೀಸರ ಅತಿಥಿ ಆಗಿದ್ದಾನೆ.

ಅಷ್ಟಕ್ಕೂ ಎಲ್ಲಿ ಅಂತೀರಾ, ಈ ಸ್ಟೋರಿ ನೋಡಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ ಕೊಲೆ ಆರೋಪಿಯಾಗಿದ್ದು ಈತನ ಪತ್ನಿ ಶಾಂತಕುಮಾರಿ ಮಡಿವಾಳ (38) ಕೊಲೆಯಾದವರಾಗಿದ್ದಾರೆ. ವಯಸ್ಸಿನಲ್ಲಿ ಹೆಂಡತಿ ಹತ್ತು ವರ್ಷ ದೊಡ್ಡವಳಾಗಿದ್ದು ಈಕೆಗೆ ಈತ ಎರಡನೇ ಗಂಡನಾಗಿದ್ದಾನೆ. ಬೇರೆ ಹೆಣ್ಣು ಮಕ್ಕಳೊಂದಿಗೆ ಮಾತನಾಡುತ್ತಾನೆಂದು ಶಾಂತಕುಮಾರಿ ತುಕಾರಾಮನ ಮೇಲೆ ಸಂಶಯ ವ್ಯಕ್ತಪಡಿಸಿದ್ದಳು. ಇದಲ್ಲದೇ ಗಂಡನಿಗೆ ಹೊಡೆಯುವುದು,ಅವಾಚ್ಯ ಶಬ್ದ ದಿಂದ ನಿಂದಿಸುವುದು ಪ್ರತಿ ದಿನದ ಕಾಯಕವಾಗಿತ್ತು ಹೆಂಡತಿಗೆ ಇನ್ನು ತುಕರಾಮನ ಬಳಿ ಎರಡು ಎಕರೆ ಜಮೀನು ಇದ್ದು ಇದನ್ನು ತನಗೆ ಬರೆದುಕೊಡಬೇಕೆಂದು ಪೀಡಿಸುತಿದ್ದಳು. ಮೊನ್ನೆ ಇದೇ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಕೊನೆಗೆ ಅದು ಪತ್ನಿಯ ಕೊಲೆಯಲ್ಲಿ ಅಂತ್ಯಗೊAಡಿತ್ತು.
ಕೊಲೆಯನ್ನ ಮುಚ್ಚಿ ಹಾಕುವ ಉದ್ದೇಶದಿಂದ ಪತ್ನಿಯ ಮೃತದೇಹವನ್ನು ತುಕಾರಾಮ್ ಬ್ಯಾರಲ್ ನಲ್ಲಿ ಬಚ್ಚಿಟ್ಟಿದ್ದ. ಪಕ್ಕದವರು ಹಾಗೂ ಖಾನಾಪುರ ಮೂಲದ ರಿಜ್ವಾನ್ ಕುಂಬಾರಿ ಎಂಬುವವರ ವಾಹನವನ್ನು ಬಾಡಿಗೆ ಪಡೆದು ಚಾಲಕ ರಿಜ್ವಾನ್ ಮತ್ತು ಅಳ್ಳಾವರ ಮೂಲದ ಸಮೀರ್ ಪಂತೋಜಿ ಹಾಗೂ ತುಕಾರಾಮ ಸೇರಿ ರಾಮನಗರದ ಕಾಡಿನಲ್ಲಿ ಮೃತದೇಹವನ್ನು ಎಸೆಯಲು ಮುಂದಾದಾಗ ರಾಮನಗರ ಹಾಗೂ ಹಳಿಯಾಳ ಪೊಲೀಸರು ಜಂಡಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಟ್ಟಿನ ಕೈನಲ್ಲಿ ಬುದ್ದಿ ಕೊಟ್ಟ ತುಕರಾಮ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ. ಇದರ ಜೊತೆ ಈತನಿಗೆ ಸಹಾಯ ಮಾಡಿದವರು ಸಹ ಕಂಬಿ ಎಣಿಸುತಿದ್ದು ,ಗಂಡನ ಮೇಲಿನ ಅನುಮಾನ ಹತ್ಯೆಯಲ್ಲಿ ಕೊನೆಯಾಗಿದ್ದು ಮಾತ್ರ ದುರಂತ.

error: