May 3, 2024

Bhavana Tv

Its Your Channel

ಕುಮಾರಿ ಸಾನ್ವಿ ರಾವ್ ಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ.

ಕಾರವಾರ: ದಿನಾಂಕ 9.2.2023 ರಂದು ದಿ ಭಾರತ ಸ್ಕೌಟ್ ಅಂಡ್ ಗೈಡ್ ಕರ್ನಾಟಕ ಇವರ ವತಿಯಿಂದ ರಾಜ್ ಭವನ್ ಬೆಂಗಳೂರಿನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಥಾವರ್ ಚಂದ್ ಗೆಲೊಟ್, ರಾಜ್ಯ ಪಾಲರು ಕರ್ನಾಟಕ ಸರ್ಕಾರ ಇವರು , ಕಾರವಾರ ಜಿಲ್ಲೆಯಿಂದ ಆಯ್ಕೆ ಗೊಂಡು ಪ್ರತಿನಿಧಿಸಿದ ಕುಮಾರಿ ಸಾನ್ವಿ ರಾವ್, ಹೊನ್ನಾವರ ಇವಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಇವಳು ಎಂ.ಪಿ.ಇ. ಸೊಸೈಟಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ ಕರ್ನಾಟಕ, ಗೈಡ್ ವಿಭಾಗಕ್ಕೆ ಸೇರಿದ್ದಳು. ಪ್ರಸ್ತುತ ಕ್ರಿಯೇಟಿವ್ ಪಿ.ಯು. ಕಾಲೇಜ್, ಕಾರ್ಕಳದಲ್ಲಿ ಪ್ರಥಮ ಪಿ. ಯು. ಸಿ. ಓದುತ್ತಿದ್ದಾಳೆ. ಅಲ್ಲದೆ ಬಹುಮುಖ ಪ್ರತಿಭೆಯಾದ ಇವಳು ಜಗದೀಶ್ ರಾವ್, ಕೆನರಾ ಬ್ಯಾಂಕ್ ಹೊನ್ನಾವರ ಹಾಗೂ ವಿನುತಾ ಭಟ್ ತರಬೇತಿ ಅಧಿಕಾರಿ, ಸರ್ಕಾರಿ ಐ.ಟಿ.ಐ ಹೊನ್ನಾವರ ಇವರ ಹೆಮ್ಮೆಯ ಪುತ್ರಿ.

error: